ಉತ್ತರ ಪ್ರದೇಶ: ಜೈ ಶ್ರೀರಾಮ್ ಹೇಳುವಂತೆ ಮುಸ್ಲಿಮ್ ಯುವಕನಿಗೆ ಚಲಿಸುತ್ತಿದ್ದ ರೈಲಿನಲ್ಲಿ ಸಂಘಪರಿವಾರದಿಂದ ಮಾರಣಾಂತಿಕ ಹಲ್ಲೆ

Prasthutha|

ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಮುಸ್ಲಿಮ್ ಯುವಕನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್’ನಲ್ಲಿ ನಡೆದಿದೆ.

- Advertisement -


ಹಿತ್ತಾಳೆ ವ್ಯಾಪಾರಿ ಆಸಿಮ್ ಹುಸೇನ್ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.


ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -


ವೈರಲ್ ವೀಡಿಯೋದಲ್ಲಿ ಮೊರಾದಾಬಾದ್’ನ ಪದ್ಮಾವತ್ ರೈಲಿನಲ್ಲಿ ವ್ಯಕ್ತಿಯೊಬ್ಬ ಯುವಕನನ್ನು ಬೆಲ್ಟ್’ನಿಂದ ಹೊಡೆಯುವುದನ್ನು ಕಾಣಬಹುದು.


ಸಂಘಪರಿವಾರದ ಕಾರ್ಯಕರ್ತರು ನನ್ನ ಮೇಲೆ ಕಳ್ಳತನದ ಆರೋಪ ಮಾಡಿ, ಮುಸ್ಲಿಮರನ್ನು ನಂಬಬಾರದು ಎಂದು ಹೇಳಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲು ಒತ್ತಾಯಿಸಿದರು. ಆದರೆ ನಾನು ಘೋಷಣೆ ಕೂಗಲು ನಿರಾಕರಿಸಿದ್ದರಿಂದ ನನ್ನ ಬಟ್ಟೆಗಳನ್ನು ಬಿಚ್ಚಿ ಬೆಲ್ಟ್ ಗಳಿಂದ ತೀವ್ರವಾಗಿ ಥಳಿಸಿದ್ದಾರೆ ಎಂದು ಸಂತ್ರಸ್ತ ಅಸಿಮ್ ಹುಸೇನ್ ಹೇಳಿದ್ದಾರೆ.

Join Whatsapp