ಜ.29ಕ್ಕೆ ಫರಂಗಿಪೇಟೆಯಲ್ಲಿ ನೌಶಾದ್ ಹಾಜಿ ಸುರಲ್ಪಾಡಿ ಅನುಸ್ಮರಣೆ, ರಕ್ತದಾನ ಶಿಬಿರ

Prasthutha|

ಫರಂಗಿಪೇಟೆ: ಫರಂಗಿಪೇಟೆ ರೇಂಜ್ ಮದ್ರಸ ಮೇನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ರೇಂಜ್ ಅಧ್ಯಕ್ಷ ಎಸ್ ಹಸನಬ್ಬ ಗುಡ್ಡೆಮನೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಫರಂಗಿಪೇಟೆಯ ಕಚೇರಿಯಲ್ಲಿ ಸಭೆ ನಡೆಯಿತು

- Advertisement -

ಫರಂಗಿಪೇಟೆ ರೇಂಜ್ ಗೊಳಪಟ್ಟ ವಿವಿಧ ಮಸೀದಿ ಮತ್ತು ಮದರಸದ ಆಡಳಿತ ಸಮಿತಿ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜ.29 ಕ್ಕೆ ಇತ್ತೀಚಿಗೆ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಮದರಸ ಮೇನೇಜ್ಮೆಂಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿಯವರ ಅನುಸ್ಮರಣೆ ಪ್ರಯುಕ್ತ ರಕ್ತದಾನ ಶಿಭಿರ ಫರಂಗಿಪೇಟೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೇಂಜ್ ಪ್ರಧಾನ ಕಾರ್ಯದರ್ಶಿ ಸಲೀಮ್ ಕುಂಪನಮಜಲ್, ಫರಂಗಿಪೇಟೆ ರೇಂಜ್ ಜಮೀಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಸ್ಮಾಯಿಲ್ ಹನೀಫಿ, ಕಾರ್ಯದರ್ಶಿ ಅಬೂ ಉವೈಸಿ ಮುಸ್ಲಿಯಾರ್ ತುಂಬೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಫರಂಗಿಪೇಟೆ ಜುಮ್ಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕು, ಅಮ್ಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ ಮತ್ತಿತರರು ಉಪಸ್ಥಿತರಿದ್ದರು.

Join Whatsapp