ಉಪ್ಪಿನಂಗಡಿ | ಇಂಡಿಯಲ್ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿ ನಿಧನ

Prasthutha|

ಪುತ್ತೂರು : ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿ ಅಹ್ಮದ್ ಸಹದ್(15) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದಿದ್ದಾರೆ.

- Advertisement -

ಮೃತ ಸಹದ್ ಉಪ್ಪಿನಂಗಡಿ ಪೆದಮಲೆಯ ನಿವಾಸಿ ಸಮದ್ ಹಾಜಿ ಹಾಗೂ ಬೆದ್ರೋಡಿಯ ರೇಷ್ಮಾ ದಂಪತಿಯ ಮೊದಲ ಪುತ್ರನಾಗಿದ್ದು, ಇಂಡಿಯನ್ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.

ಸಂತಾಪ ಸೂಚಕವಾಗಿ ನಾಳೆ ಇಂಡಿಯನ್ ಸ್ಕೂಲಿಗೆ ರಜೆ ಘೋಷಿಸಲಾಗಿದ್ದು, ನಾಳೆ ನಡೆಯಬೇಕಿದ್ದ  ಪರೀಕ್ಷೆ ಮುಂದೂಡಲಾಗಿದೆ. ಬುಧವಾರದ ಪರೀಕ್ಷೆ ಎಂದಿನಂತೆ ನಡೆಯಲಿದೆ ಎಂದು ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

Join Whatsapp