ಉಪ್ಪಿನಂಗಡಿ: KSRTC ಬಸ್ ಢಿಕ್ಕಿ| ಕುದುರೆ ಹಾಗೂ ಸವಾರ ಗಂಭೀರ

Prasthutha|

ಉಪ್ಪಿನಂಗಡಿ: KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಕುದುರೆ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

- Advertisement -

ಉಪ್ಪಿನಂಗಡಿಯ ಪೆದಮಲೆ ಎಂಬಲ್ಲಿ ಕುದುರೆಯೊಂದಕ್ಕೆ KSRTC ಬಸ್ ಡಿಕ್ಕಿ ಹೊಡೆದಿದ್ದು,  ಪರಿಣಾಮ ಕುದುರೆ ಹಾಗೂ ಕುದುರೆ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.

ಸಚಿನ್ ಪೆಲಪ್ಪಾರ್ ಎಂಬವರು ಕುದುರೆ ಸವಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ KSRTC ಬಸ್ ಡಿಕ್ಕಿ ಹೊಡೆದಿದ್ದು, ಗಾಯಾಳು ಸಚಿನ್ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

 ಕುದುರೆ ಕೂಡಾ ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ ಎಂದು ತಿಳಿದುಬಂದಿದೆ.

Join Whatsapp