ಇಸ್ರೇಲ್ ದಾಳಿಗಳನ್ನು ಶ್ಲಾಘನೆ ಮಾಡಿದ ಯುಪಿ ಸಿಎಂ ಆದಿತ್ಯನಾಥ್

Prasthutha|

ಜೈಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಾಝಾದ ಮೇಲೆ ಇಸ್ರೇಲ್ ದಾಳಿಗಳನ್ನು ಶ್ಲಾಘನೆ ಮಾಡಿದ್ದಾರೆ. ಮಧ್ಯಪ್ರಾಚ್ಯ ದೇಶವು “ತಾಲಿಬಾನಿ ಮನಸ್ಥಿತಿ” ಯನ್ನು ಹತ್ತಿಕ್ಕುವ ದೊಡ್ಡ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

- Advertisement -

ಚುನಾವಣೆ ನಡೆಯಲಿರುವ ರಾಜಸ್ಥಾನದ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಾಬಾ ಬಾಲಕನಾಥ್ ನಾಮಪತ್ರ ಸಲ್ಲಿಸಿದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಸ್ರೇಲ್-ಹಮಾಸ್ ಯುದ್ಧವನ್ನು ಉಲ್ಲೇಖಿಸುತ್ತಾ, ತಾಲಿಬಾನ್ ಕಾ ಉಪಚಾರ್‌ ತೋ ಬಜರಂಗಬಲಿ ಕಿ ಗದಾ ಹೈ ಹೈ (ಹನುಮಂತನ ಗದೆಯಿಂದ ಮಾತ್ರ ತಾಲಿಬಾನ್ ನಿರ್ಮೂಲನೆ ಸಾಧ್ಯ)” ಎಂದು ಹೇಳಿದರು. ಗಾಝಾದಲ್ಲಿ ಇಸ್ರೇಲ್ ಹೇಗೆ ತಾಲಿಬಾನಿ ಮನಸ್ಥಿತಿಯನ್ನು ಹತ್ತಿಕ್ಕುತ್ತಿದೆ ಎಂಬುದನ್ನು ನೀವು ಈಗಾಗಲೇ ನೋಡ್ತಾ ಇದ್ದೀರಲ್ಲ ಎಂದು ಹೇಳಿದರು.

- Advertisement -

ಅವರು ತಮ್ಮ ಗುರಿಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆದಿತ್ಯನಾಥ್‌ ಹೇಳಿದ್ದಾರೆ.

Join Whatsapp