ಮಂಗಳೂರು: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಮತ್ತೆ ತಡೆದ ವಿವಿ ಪ್ರಾಂಶುಪಾಲೆ

Prasthutha|

ಮಂಗಳೂರು: ಕಳೆದ ಕೆಲವು ದಿನಗಳಿಂದ ವಿವಿ ವಿದ್ಯಾರ್ಥಿನಿಯರಿಗೆ ಹಠಾತ್ತನೇ ಹಿಜಾಬ್ ನಿಷೇಧಿಸಲಾಗಿತ್ತು. ಈ ಬಗ್ಗೆ ಸಿಡಿದೆದ್ದಿದ್ದ ವಿದ್ಯಾರ್ಥಿನಿಯರು ಕಾಲೇಜು ಮುಂಭಾಗ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾಗ್ಯೂ ಹಿಜಾಬಿಗೆ ಅವಕಾಶ ನೀಡದ ವಿವಿ ಆಡಳಿತ ಮಂಡಳಿ ಇಂದು ಕೂಡ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ನಿರಾಕರಿಸಿದೆ.

- Advertisement -

ಇಂದು 16 ಮಂದಿ ಹಿಜಾಬ್ ವಿದ್ಯಾರ್ಥಿನಿಯರು ವಿವಿ ಘಟಕ ಕಾಲೇಜಿಗೆ ಆಗಮಿಸಿದ್ದು, ತರಗತಿ ಪ್ರವೇಶಕ್ಕೆ ಪ್ರಾಂಶುಪಾಲೆ ಡಾ.ಅನುಸೂಯ ರೈ ನಿರಾಕರಿಸಿದ್ದಾರೆ. ಪ್ರಾಂಶುಪಾಲೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಲೇಜು ಲೈಬ್ರರಿ ಮುಂಭಾಗವೇ ವಿದ್ಯಾರ್ಥಿನಿಯರು ಕುಳಿತುಕೊಂಡಿದ್ದಾರೆ.

ಹಿಜಾಬ್ ಅವಕಾಶಕ್ಕೆ ಕೋರಿ ಈ ಹಿಂದೆ ವಿವಿ ವಿದ್ಯಾರ್ಥಿನಿಯರು ಕಳೆದ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ರನ್ನು ಭೇಟಿ ಮಾಡಿದ್ದರು. ಭೇಟಿಯ ಹೊರತಾಗಿಯೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಲಾಗಿತ್ತು.

Join Whatsapp