ಅಪರಿಚಿತ ವಾಹನ ಡಿಕ್ಕಿ; ತಂದೆ, ಮಗ ಮೃತ್ಯು

Prasthutha|

ಉಡುಪಿ : ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತಂದೆ ಮಗ ಇಬ್ಬರೂ ಮೃತಪಟ್ಟ ಘಟನೆ ಉಚ್ಚಿಲದಲ್ಲಿ ನಡೆದಿದೆ.

- Advertisement -

ಬೆಳಗಾವಿ ಹುಕ್ಕೇರಿ ಭಗವಾನ್ ಗಲ್ಲಿಯ ಪ್ರಭಾಕರ್ ಶಂಕರ್ ಪೊದ್ದ ಹಾಗೂ ಮಗ ಸಮರ್ಥ್ ಪೊದ್ದ(14) ಮೃತ ದುರ್ದೈವಿಗಳು.

ಕಾಪು ಸಮೀಪದ ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ   ಮಗ ಸಮರ್ಥ್ ನನ್ನು  ರಜೆ ಕಳೆದು ಮರಳಿ ಕರೆತಂದಿದ್ದ ಪ್ರಭಾಕರ್ ಶಂಕರ್ ಪೊದ್ದ ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನಿಂತಿದ್ದಾಗ ಅಪರಿಚಿತ ವಾಹನ ಢಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

- Advertisement -

ಅಪಘಾತದಲ್ಲಿ ಮಗ ಸಮರ್ಥ್ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಿಗ್ಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಆನೆಗುಂದಿ ಸರಸ್ವತಿ ಪೀಠ ಸಂಚಾಲಿತ ಸೂರ್ಯ ಚೈತನ್ಯ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಸಮರ್ಥ್ ನಿಧನದ ಪ್ರಯುಕ್ತ ಶಾಲೆಗೆ ರಜೆ ಘೋಷಿಸಲಾಗಿದೆ.

Join Whatsapp