ಬಿರುಗಾಳಿಗೆ ಸಿಲುಕಿ ಸಮುದ್ರಪಾಲು । ಸತತ 30 ಗಂಟೆಗಳ ಹೋರಾಟ । ಮಲ್ಪೆ ದಡ ತಲುಪಿದ ಉಳ್ಳಾಲದ ಮೀನುಗಾರ

Prasthutha|

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ವೇಳೆ ಭಯಾನಕ ಬಿರುಗಾಳಿಗೆ ಸಿಲುಕಿ, ನಾಪತ್ತೆಯಾಗಿದ್ದ ಉಳ್ಳಾಲದ ಮೀನುಗಾರ ಸುನಿಲ್ ಕುವೆಲ್ಲೊ ಮಲ್ಪೆಯಲ್ಲಿ ಪತ್ತೆಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಕುವೆಲ್ಲೊ ಸೇರಿದಂತೆ 29 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಆದರೆ, ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೊಡಗಿದ್ದಾಗ, ಬಿರುಗಾಳಿ ಬಂದು ದುರ್ಘಟನೆ ಸಂಭವಿಸಿತ್ತು.

- Advertisement -

ಉಳಿದವರು ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಕುವೆಲ್ಲೊ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ನಿನ್ನೆ ಮಧ್ಯಾಹ್ನ ಈ ಬೋಟ್ ನ ಬೆಲ್ಟ್ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುವೆಲ್ಲೊ ಶೋಧ ಕಾರ್ಯ ಮುಂದುವರೆದಿತ್ತು. ಆದರೆ, ಇಂದು ಕುವೆಲ್ಲೊ ಮಲ್ಪೆಯಲ್ಲಿ ಸಿಕ್ಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ರಾತ್ರಿ ವರೆಗೂ ಬಲೆಯನ್ನು ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದೆವು. ಮಧ್ಯರಾತ್ರಿ ಗಾಳಿ ಮಳೆ ಹೆಚ್ಚಾಗಿ ಬೋಟ್ ಗೆ ಕಟ್ಟಿದ್ದ ಪಾತಿ ಹಗ್ಗ ತುಂಡಾಗಿ ಸಮುದ್ರ ಪಾಲಾಯಿತು. ಬಲೆ ಎಳೆಯಲೆಂದು ಪಾತಿಯಲ್ಲಿ ಕುಳಿತಿದ್ದೆ. ಆದರೆ, ತಪ್ಪಿಸಿಕೊಳ್ಳಲಾಗಲಿಲ್ಲ. ಸತತ 30 ಗಂಟೆ ಸಮುದ್ರದಲ್ಲಿ ಏಕಾಂಗಿಯಾಗಿ ಹೋರಾಡಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಕುವೆಲ್ಲೊ ಹೇಳಿರುವುದಾಗಿ ವರದಿಯಾಗಿದೆ.

Join Whatsapp