ಉಳ್ಳಾಲ | ದರ್ಗಾ ಸಮಿತಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದ ಎಸ್.ಡಿ.ಪಿ.ಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ

Prasthutha|

ಉಳ್ಳಾಲ: ಐತಿಹಾಸಿಕ ಖುತುಬುಝ್ಝಮಾನ್ ಸಯ್ಯಿದ್ ಶರೀಫುಲ್ ಮದನಿ ಉಳ್ಳಾಲ ದರ್ಗಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹನೀಫ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಅವರನ್ನು ಎಸ್.ಡಿ.ಪಿ,ಐ ಪಕ್ಷದ ಉಳ್ಳಾಲ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಅವರು ದರ್ಗಾದ ಕಚೇರಿಯಲ್ಲಿ ಸನ್ಮಾನಿಸಿದರು.

- Advertisement -


ದರ್ಗಾ ಸಮಿತಿಯ ಉಪಾಧ್ಯಕ್ಷರಾದ ರೈಟ್ ವೇ ಅಶ್ರಫ್, ಹಸೈನಾರ್ U.H, ಕೋಶಾಧಿಕಾರಿ ನಾಝಿಂ ಕೋಟೆಪುರ, ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಉಳ್ಳಾಲ ದರ್ಗಾದ ನೂತನ ಆಡಳಿತ ಸಮಿತಿಯ ಅಧಿಕಾರಾವಧಿಯಲ್ಲಿ ಉಳ್ಳಾಲ ದರ್ಗಾವು ಸರ್ವತೋಮುಖ ಅಭಿವೃದ್ಧಿ ಕಾಣಲಿ ಹಾಗೂ ಮುಸ್ಲಿಂ ಸಮುದಾಯದ ಸರ್ವ ಸಮಸ್ಯೆಗಳಿಗೆ ಉಳ್ಳಾಲ ದರ್ಗಾವು ಒಂದು ಪರಿಹಾರ ಕೇಂದ್ರವಾಗಿ ಮಾರ್ಪಡಲಿ ಎಂದು ರಿಯಾಝ್ ಫರಂಗಿಪೇಟೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಸಂಯೋಜಕ ನವಾಝ್ ಉಳ್ಳಾಲ, ಕ್ಷೇತ್ರ ಸಮಿತಿಯ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಎಸ್’ಡಿಪಿಐ ನಗರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಎ.ಆರ್, ನಗರ ಸಮಿತಿ ಉಪಾಧ್ಯಕ್ಷ ಇಂತಿಯಾಝ್ ಕೋಟೆಪುರ, ಸಮಾಜಸೇವಕ ನಿಝಾಮ್ ಉಳ್ಳಾಲ, ಕ್ಷೇತ್ರ ಸಮಿತಿ ಸದಸ್ಯರಾದ ರವೂಫ್ ಉಳ್ಳಾಲ, ಕೌನ್ಸಿಲರ್ ಅಸ್ಗರ್ ಅಲಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Join Whatsapp