ಕಾರು ಬಸ್ ಗೆ ಡಿಕ್ಕಿ ಹೊಡೆದು ಯುವಕರಿಬ್ಬರು ಮೃತ್ಯು

Prasthutha|

ಬೆಂಗಳೂರು: ಕಾರು ಬಸ್ ಗೆ ಡಿಕ್ಕಿ ಹೊಡೆದು ಯುವಕರಿಬ್ಬರು ಮೃತಪಟ್ಟ ದಾರುಣ ಘಟನೆ ಮಡಿವಾಳದ ಸಿಲ್ಕ್ ಬೋರ್ಡ್​ ಬಳಿಯಲ್ಲಿ ನಡೆದಿದೆ.

- Advertisement -

ಆಂಧ್ರ ಪ್ರದೇಶದ ಅನಂತಪುರ ಮೂಲದ ಕಾರ್ತಿಕ್ (23), ಭಗೀರಥ ರೆಡ್ಡಿ (17) ಮೃತಪಟ್ಟವರೆಂದು ಡಿಜಿಪಿ ಕಲಾಕೃಷ್ಣಸ್ವಾಮಿ‌ ಅವರು ತಿಳಿಸಿದ್ದಾರೆ.

ಅಜಾಗರೂಕತೆಯ ಚಾಲನೆಯೇ ಇಬ್ಬರು ಯುವಕರ ಸಾವಿಗೆ ಕಾರಣ ಎನ್ನಲಾಗಿದೆ.

- Advertisement -

ಅತಿವೇಗವಾಗಿ ಹೋಗುತ್ತಾ ಹಿಂದಿನಿಂದ ತಮಿಳುನಾಡು ಸಾರಿಗೆ ಬಸ್​ಗೆ ಕಾರ್ತಿಕ್  ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮಡಿವಾಳ ಸಂಚಾರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Join Whatsapp