ಉತ್ತರಪ್ರದೇಶದ ಇಬ್ಬರು ಬಿಜೆಪಿ ಶಾಸಕರು ಕೋವಿಡ್ ಗೆ ಬಲಿ

Prasthutha|

ಕೋವಿಡ್ ನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಇಬ್ಬರು ಬಿಜೆಪಿ ಶಾಸಕರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

- Advertisement -

ಮೃತರನ್ನು ಔರಿಯಾ ಸಿಟಿ ಶಾಸಕ ರಮೇಶ್ ದಿವಾಕರ್ ಮತ್ತು ಲಕ್ನೋ ವೆಸ್ಟ್ ಶಾಸಕ ಸುರೇಶ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ.

ದಿವಾಕರ್ ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀ ವಾಸ್ತವ ಅವರು ಲಖನೌದಲ್ಲಿನ ಸಂಜಯ್ ಗಾಂಧಿ ಪೋಸ್ಟ್ ಗ್ರಾಜ್ಯುವೇಟ್ ಆಫ್ ಮೆಡಿಕಲ್ ಸಯನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ದಿವಾಕರ್ ತಮ್ಮ ಚೊಚ್ಚಲ ಗೆಲುವಿನೊಂದಿಗೆ ಉತ್ತರಪ್ರದೇಶದ ವಿಧಾನಸಭೆಗೆ ಪ್ರವೇಶಿಸಿದ್ದರು. ಶ್ರೀವಾಸ್ತವ ಉತ್ತರ ಪ್ರದೇಶದ ಬಿಜೆಪಿಯ ಹಿರಿಯ ಮುಖಂಡರಾಗಿದ್ದಾರೆ.

Join Whatsapp