ಅಸ್ಸಾಮ್। ಪೊಲೀಸ್ ಎನ್ಕೌಂಟರ್’ಗೆ ಇಬ್ಬರು ಮುಸ್ಲಿಮರು ಬಲಿ

Prasthutha|

ಗುವಾಹಟಿ: ಅಕ್ರಮ ಜಾನುವಾರು ಸಾಗಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತ ಆರೋಪಿಗಳಾದ ಅಕ್ಬರ್ ಬಂಜಾರ, ಸಲ್ಮಾನ್ ಎಂಬವರು ಅಸ್ಸಾಮ್ ಪೊಲೀಸರು ನಡೆಸಿದ ಎನ್ಕೌಂಟರ್’ಗೆ ಬಲಿಯಾಗಿದ್ದಾರೆ.

- Advertisement -

ಅಸ್ಸಾಮ್ ನ ಕೊಕ್ರಜಾರ್ ಎಂಬಲ್ಲಿ ಅಕ್ರಮ ಜಾನುವಾರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ರಿಲ್ 13 ಉತ್ತರ ಪ್ರದೇಶದ ಮೀರತ್ ಪೊಲೀಸರಿಂದ ಬಂಧಿತರಾದ ಆರೋಪಿಗಳನ್ನು ವಾರಂಟ್ ಆಧಾರದಲ್ಲಿ ಅಸ್ಸಾಮ್ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಗಿತ್ತು.

ಈ ಮಧ್ಯೆ ಅಸ್ಸಾಮ್ ಪೊಲೀಸರು ನಡೆಸಿದ ಎನ್ಕೌಂಟರ್’ಗೆ ಇಬ್ಬರು ಮುಸ್ಲಿಮರು ಬಲಿಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Join Whatsapp