ಕೊಡಗು: ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿ, ಅಂಬೇಡ್ಕರ್‌ ನಿಂದನೆಗೈದಿದ್ದ ಶಿಕ್ಷಕ ಅಮಾನತು

Prasthutha|

► ► ಗೌರಿ,ದಾಬೋಲ್ಕರ್‌, ಕಲ್ಬುರ್ಗಿ ಹತ್ಯೆಯಾದಂತೆ ನಿನ್ನನ್ನೂ ಹತ್ಯೆ ಮಾಡುತ್ತಾರೆಂದಿದ್ದ ಶಿಕ್ಷಕ !

- Advertisement -

ಕೊಡಗು: ವಿದ್ಯಾರ್ಥಿಯೋರ್ವನಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿ, ಡಾ. ಬಿ. ಆರ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರಪೇಟೆ ತಾಲ್ಲೂಕು ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಧರ್ಮರಾಜ್‌ ರನ್ನು ಅಮಾನತುಗೊಳಿಸಿ ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ, ಕುಶಾಲನಗರದ ಅಂತಿಮ ವರ್ಷದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿ ಅಭಿಲಾಷ್ ಭಾಷಣ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಈ ಭಾಷಣದ ಬಗ್ಗೆ ತಗಾದೆ ತೆಗೆದಿದ್ದ ಶಿಕ್ಷಕ ಧರ್ಮರಾಜ್‌, ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿ, ಅಂಬೇಡ್ಕರ್ ವಿಚಾರಗಳ ಕುರಿತಾಗಿ ಅವಮಾನ ಮಾಡಿದ್ದ. ಈ ಬಗ್ಗೆ ಶಿಕ್ಷಕನ ಆಡಿಯೋ ವೈರಲ್ ಆಗಿತ್ತು.

- Advertisement -

ಸರಕಾರಿ ನೌಕರನಾಗಿರುವ ಧರ್ಮರಾಜ್‌, ಅಂಬೇಡ್ಕತ್ ವಿಚಾರಗಳಿಗೆ ಅವಮಾನ ಮಾಡಿರುವುದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.

ವಿದ್ಯಾರ್ಥಿ ಅಭಿಲಾಷ್‌’ಗೆ ಕರೆ ಮಾಡಿದ್ದ ಧರ್ಮರಾಜ್, ಗೌರಿ ಲಂಕೇಶ್‌, ನರೇಂದ್ರ ದಾಬೋಲ್ಕರ್‌, ಎಂ.ಎಂ.ಕಲ್ಬುರ್ಗಿ ಹಾಗೂ ಗೋವಿಂದ ಪಾನ್ಸರೆ ಹತ್ಯೆಯಾದಂತೆ ನ ನಿನ್ನನ್ನೂ ಹತ್ಯೆ ಮಾಡಲಾಗುತ್ತದೆ ಎಂದು ಬೆದರಿಸಿದ್ದ ಆಡಿಯೀ ಇತ್ತೀಚೆಗಷ್ಟೆ ವೈರಲ್ ಆಗಿತ್ತು.

Join Whatsapp