ತುಮಕೂರು | ಜೈಕಾರ ಕೂಗಿದ ಕಾರ್ಯಕರ್ತನಿಗೆ ಗೂಸ ನೀಡಿದ ಮಾಜಿ ಶಾಸಕ

Prasthutha|

ತುಮಕೂರು: ತನಗೆ ಜೈಕಾರ ಕಾರ್ಯಕರ್ತನ ಮೇಲೆಯೇ ಮಾಜಿ ಶಾಸಕ ಸುರೇಶ್ ಗೌಡ ಅವರು ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಬಳಗೆರೆಯಿಂದ ವರದಿಯಾಗಿದೆ.

- Advertisement -

ಮಾಜಿ ಶಾಸಕ ಸುರೇಶ್ ಗೌಡ ಅವರು ದೇವರ ಉತ್ಸವ ಪ್ರಯುಕ್ತ ಬಳಗೆರೆ ಗ್ರಾಮಕ್ಕೆ ಭೇಟಿ ನೀಡಿದ್ದು, ಭಕ್ತರಿಗೆ ದಾಸೋಹ ಆಯೋಜಿಸಲಾಗಿತ್ತು.

ಈ ಮಧ್ಯೆ ಸುರೇಶ್ ಗೌಡ ಊಟದ ಪಂಕ್ತಿಯಲ್ಲಿ ಜನರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಕಾರ್ಯಕರ್ತನೊಬ್ಬ ಅವರಿಗೆ ಜೈಕಾರ ಕೂಗಿದ್ದಾನೆ. ಏರು ಧ್ವನಿಯಲ್ಲಿ ಜೈಕಾರ ಕೂಗಿದಕ್ಕೆ ರೊಚ್ಚಿಗೆದ್ದ ಸುರೇಶ್ ಗೌಡ, ಕಾರ್ಯಕರ್ತನ ಹೊಟ್ಟೆಗೆ ಹೊಡೆದು ಜೈಕಾರ ಕೂಗದಂತೆ ಎಚ್ಚರಿಸಿದ್ದಾರೆ.

- Advertisement -

Join Whatsapp