ಟಗ್ ಬೋಟ್ ದುರಂತ | ಮೃತಪಟ್ಟವರ ಕುಟುಂಬಕ್ಕೆ 10ಲಕ್ಷ ರೂ. ಪರಹಾರ ನೀಡುವಂತೆ ಸಚಿವ ಆರ್. ಅಶೋಕ್ ಸೂಚನೆ

Prasthutha|

ಮಂಗಳೂರು : ಅರಬ್ಬಿ ಸಮುದ್ರದ ಟಗ್ ಬೋಟ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಲಾ 10 ಲಕ್ಷ ರೂ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

- Advertisement -

MRPL ಕಂಪೆನಿಯಿಂದ 5 ಲಕ್ಷ ರೂ ಮತ್ತು ಸರಕಾರದಿಂದ 5 ಲಕ್ಷ ರೂ ನೀಡಲು ಸೂಚಿಸಿದ ಸಚಿವರು, ಚಂಡಮಾರುತದಿಂದ ಹಾನಿಗೊಳಗಾದ 182 ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಭಾಗಶಃ ಮನೆ ಹಾನಿಯಾದವರಿಗೆ 1ಲಕ್ಷ ರೂಪಾಯಿ ಮತ್ತು ಪೂರ್ತಿ ಮನೆ ಹಾನಿಯಾದವರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Join Whatsapp