ಪೊಲೀಸ್ ಜೀಪಿನಿಂದ ಹಾರಿ ಪರಾರಿಯಾಗಲು ಯತ್ನ| ತೀವ್ರ ಗಾಯಗೊಂಡ ಆರೋಪಿ ಮೃತ್ಯು

Prasthutha|

ತ್ರಿಶೂರ್: ಪೊಲೀಸ್ ಜೀಪಿನಿಂದ ಹಾರಿ ಪರಾರಿಯಾಗಲು ಯತ್ನಿಸುವ ವೇಳೆ ತೀವ್ರ ಗಾಯಗೊಂಡಿದ್ದ ಆರೋಪಿಯೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.

- Advertisement -

ಕೇರಳದ ರಾಜಧಾನಿ ತಿರುವನಂತಪುರದ ವಲಿಯತುರಾ ನಿವಾಸಿ ಸನು ಸೋನಿ (32) ಮೃತಪಟ್ಟ ಆರೋಪಿಯಾಗಿದ್ದಾನೆ.

ತ್ರಿಶೂರ್ ನಗರದಲ್ಲಿ ಕುಡಿದ ಮತ್ತಿನಲ್ಲಿ ಜನರಿಗೆ ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದ ಸೋನಿಯನ್ನು ಪೊಲೀಸರು ಬಂಧಿಸಿದ್ದರು.

- Advertisement -

ಬಂಧನಕ್ಕೊಳಗಾಗಿದ್ದ ಆರೋಪಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ವಿಯೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ, ಅಶ್ವನಿ ಜಂಕ್ಷನ್‌ನಲ್ಲಿ ಚಲಿಸುತ್ತಿದ್ದ ಜೀಪಿನ ಬಾಗಿಲು ಎಳೆದು ಪರಾರಿಯಾಗಲು ಯತ್ನಿಸಿದ್ದಾನೆ.

ತಲೆಗೆ ಗಂಭೀರ ಗಾಯವಾದ ಸೋನಿಯನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

Join Whatsapp