ಕೆಪಿಸಿಸಿ ರಾಜ್ಯ ಮೈನಾರಿಟಿ ಪ್ರಧಾನ ಕಾರ್ಯದರ್ಶಿಯಾಗಿ ಖಲೀಲುರ್ರಹ್ಮಾನ್ ನೇಮಕ

Prasthutha|

ಬೆಂಗಳೂರು: ಹೊಸದುರ್ಗದ ನಿವಾಸಿ, ಕಾಂಗ್ರೆಸ್ ಮುಖಂಡ ಖಲೀಲುರ್ರಹ್ಮಾನ್ ಅವರನ್ನು ಕೆಪಿಸಿಸಿ ರಾಜ್ಯ ಮೈನಾರಿಟಿ ಪ್ರಧಾನ ಕಾರ್ಯದರ್ಶಿಯಾಗಿ ಖಲೀಲುರ್ರಹ್ಮಾನ್ ನೇಮಕ ಮಾಡಲಾಗಿದೆ.

- Advertisement -

  ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೈನ್ ರವರ ಶಿಫಾರಸ್ಸಿನ ಮೇರೆಗೆ ಮತ್ತು ಎ.ಐ.ಸಿ.ಸಿ ಮೈನಾರಿಟಿ ಅಧ್ಯಕ್ಷ ಇಮ್ರಾನ್ ಪ್ರತಾಪಗಡಿ ರವರ ಅನುಮೋದನೆ ಪಡೆದು ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ರವರು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ರಹ್ಮಾನ್ ಅವರ ತಂದೆ ದಿವಂಗತ ಸಾದಿಕುಲ್ಲಾ ರವರು ದಿವಂಗತ ಸಿ.ಕೆ. ಜಾಫರ್ ಶರೀಫರ ಸೋದರಳಿಯ, ಚಿತ್ರದುರ್ಗ ಜಿಲ್ಲೆಯ ವಕ್ಫ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Join Whatsapp