ಭೀಕರ ರಸ್ತೆ ಅಪಘಾತದಿಂದ ಹೊತ್ತಿ ಉರಿದ ಟ್ರಕ್: ನಾಲ್ವರು ಸಜೀವ ದಹನ

Prasthutha|

ರಾಜಸ್ಥಾನ:  ಟ್ರಕ್​ ಗಳ ನಡುವೆ ಭೀಕರ ಅಪಘಾತ ಸಂಭವಿಸಿ, ಇದರ ರಭಸಕ್ಕೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಅಜ್ಮೀರ್​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-8 ರಲ್ಲಿ ಸಂಭವಿಸಿದೆ.

- Advertisement -

ಬೇವಾರ್‌ ನಿಂದ ಬರುತ್ತಿದ್ದ ಅಮೃತ ಶಿಲೆ ತುಂಬಿದ್ದ ಟ್ರಕ್‌ ಅಜ್ಮೀರ್‌ ನಿಂದ ಬರುತ್ತಿದ್ದ ಗ್ಯಾಸ್‌ ತುಂಬಿದ್ದ ಟ್ರಕ್‌ ಗೆ ಢಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಟ್ರಕ್‌ ಹೊತ್ತಿ ಉರಿದಿದ್ದು, ಎರಡೂ ಟ್ರಕ್‌ ಗಳಲ್ಲಿದ್ದ ಚಾಲಕರು ಹಾಗೂ ಸಹಾಯಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬೆಂಕಿಯನ್ನು ನಂದಿಸಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ಚಾಲಕರ ಗುರುತು ಪತ್ತೆ ಮಾಡಲಾಗಿದ್ದು, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಮೃತ ಸಹಾಯಕರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಜ್ಮೀರ್ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸೀತಾರಾಮ್ ಪ್ರಜಾಪತ್ ತಿಳಿಸಿದ್ದಾರೆ. ಈ ಸಂಬಂಧ ಆದರ್ಶ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Join Whatsapp