ಪುನೀತ್ ನಿಧನದಿಂದ ಆಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

Prasthutha|

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ನೊಂದು ಆತ್ಮಹತ್ಯೆ ಹಾಗು ಹೃದಯಾಘಾತದಿಂದ ಸಾವನ್ನಪ್ಪುವ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪ್ಪು ಸಾವಿನ ಸುದ್ದಿ ತಿಳಿದ ಬಳಿಕ ನಿಧನರಾದವರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ.

- Advertisement -


ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಕೋಡಿಪಾಳ್ಯ ಗ್ರಾಮದ ಭರತ್ (30) ಹಾಗೂ ದಾವಣಗೆರೆ ನಗರದ ವಿಜಯನಗರ ಬಡಾವಣೆಯ ಸಾಯಿ ಮಂದಿರದ ಬಳಿಯ ವಾಸಿಯಾದ ಕುಮಾರ(25) ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಅಪ್ಪುವಿನ ಅಪ್ಪಟ ಅಭಿಮಾನಿಗಳಾಗಿದ್ದರು.


ಇದಕ್ಕೂ ಮೊದಲು ಸಿಂಧನೂರು ತಾಲೂಕಿನ ಅರಾಪುರದ ಬಸನಗೌಡ (22), ಯಾಪಲಪರ್ವಿಯ ಮುಹಮ್ಮದ್ ರಫಿ (25), ಅಥಣಿ ಪಟ್ಟಣದ ರಾಹುಲ್ ಗಾಡಿವಡ್ಡರ (26), ಬೆಳಗಾವಿಯ ಶಿಂದೋಳ್ಳಿ ಗ್ರಾಮದ ಪರಶುರಾಮ್ ದೇಮಣ್ಣನವರ್, ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನ ಹಳ್ಳಿಯಲ್ಲಿ ರಾಜೇಂದ್ರ(40), ಕೊಪ್ಪಳದ ಜ್ಞಾನಮೂರ್ತಿ ತಿಮ್ಮಣ್ಣ ಎಂಬವರು ಕೂಡ ಪುನೀತ್ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆನೇಕಲ್, ಚಾಮರಾಜನಗರದಲ್ಲಿ ಕೂಡ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

Join Whatsapp