ರಾಜ್ಯಾದ್ಯಂತ ಇಂದು ಟಿಪ್ಪು ಜಯಂತಿ ಆಚರಣೆ; ಸ್ವಾತಂತ್ರ್ಯ ಸೇನಾನಿಗೆ ನಮನ ಸಲ್ಲಿಸಿದ ನಾಯಕರು

Prasthutha|

ಬೆಂಗಳೂರು: ರಾಜ್ಯಾದ್ಯಂತ ಇಂದು ಸ್ವಾತಂತ್ರ್ಯ ಸೇನಾನಿ ಟಿಪ್ಪು ಜನ್ಮ ದಿನಾಚರಣೆ ಆಚರಿಸಲಾಯಿತು.

- Advertisement -

ಹಲವಾರು ರಾಜಕೀಯ ನಾಯಕರು ಹಾಗೂ ಸಮಾನ ಮನಸ್ಕರು ಬಹಳ ವಿಜೃಂಭಣೆಯಿಂದ ಟಿಪ್ಪು ಜಯಂತಿ ಆಚರಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ  ಕಾಂಗ್ರೆಸ್ ನಾಯಕ ಬಿ .ಕೆ ಹರಿಪ್ರಸಾದ್, ನಾಡಿಗಾಗಿ ಹೆತ್ತ ಮಕ್ಕಳನ್ನೇ ಒತ್ತೆ ಇಟ್ಟ ಅಪ್ರತಿಮ ದೇಶಪ್ರೇಮಿ, ದೇಶದ ‌ಮೊದಲ ಸ್ವತಂತ್ರ ಸೇನಾನಿ, ದಕ್ಷ ಆಡಳಿತಗಾರನಾಗಿ ಸರ್ವ ಧರ್ಮದವರನ್ನು ಪೊರೆದ “ಮೈಸೂರಿನ ಹುಲಿ” ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು. ಟಿಪ್ಪುವಿನ ವೈಜ್ಞಾನಿಕ ಮನೋಭಾವ, ಸರ್ವಧರ್ಮ ಸಹಿಷ್ಣುತೆ, ದೂರದೃಷ್ಟಿ ಆಲೋಚನೆಗಳನ್ನು ಇತಿಹಾಸದಿಂದ ಅಳಿಸಲಾಗದು ಎಂದು ಹೇಳಿದ್ದಾರೆ.

- Advertisement -

ಟ್ವೀಟ್ ಮೂಲಕ ಟಿಪ್ಪು ಜಯಂತಿಯ ಶುಭಾಶಯವನ್ನು ಕೋರಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಪ್ರತಿಮ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ. ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು ಎಂದು ಹೇಳಿದ್ದಾರೆ.

Join Whatsapp