ಮರಕ್ಕೆ ಅಪ್ಪಳಿಸಿದ ಬೈಕ್: ಮೂವರು PU ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

Prasthutha|

ತಿರುವನಂತಪುರಂ: ಅತಿವೇಗದ ಕಾರಣ ನಿಯಂತ್ರಣ ಕಳೆದುಕೊಂಡ ಬೈಕ್’ಒಂದು ರಸ್ತೆಯಂಚಿನ ಮರಕ್ಕೆ ಅಪ್ಪಳಿಸಿದ ಪರಿಣಾಮ, ಬೈಕ್’ನಲ್ಲಿ ಸಂಚರಿಸುತ್ತಿದ್ದ  ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ಕೇರಳದ ರಾಜಧಾನಿ ತಿರುವನಂತಪುರಂನ ನೆಡುಮಂಙಾಡ್ ಎಂಬಲ್ಲಿ ನಡೆದಿದೆ. ಅಪಘಾತದ ವೀಡಿಯೋ ರಸ್ತೆಯ ಮತ್ತೊಂದು ಬದಿಯಲ್ಲಿ ಅಳವಡಿಸಲಾಗಿದ್ದ CCTVಯಲ್ಲಿ ಸೆರೆಯಾಗಿದ್ದು, ಮೈಜುಂ ಎನಿಸುವಂತಿದೆ.

- Advertisement -

ಮೃತ ವಿದ್ಯಾರ್ಥಿಗಳನ್ನು  ನೆಡುಮಂಙಾಡ್ ನಿವಾಸಿ ಸ್ಟೀಫನ್ (16), ಪೇರೂರ್’ಕಡ ನಿವಾಸಿ ಬಿನೀಶ್ (16) ಹಾಗೂ ಮುಲ್ಲಪ್ಪನ್ (16) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪ್ರಥಮ ವರ್ಷ PU  ವಿದ್ಯಾರ್ಥಿಗಳಾಗಿದ್ದಾರೆ. ಮಂಗಳವಾರ ಸಂಜೆ ಘಟನೆ ನಡೆದಿದ್ದು, ಮೃತದೇಹಗಳನ್ನು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ.

 ಅತಿವೇಗವೇ ಅಪಘಾತಕ್ಕೆ ಕಾರಣವೆಂಬುದು ವೀಡಿಯೋದಲ್ಲಿ ಸ್ಪಷ್ಟವಾಗಿದ್ದು. ವಝಯಿಲ ಎಂಬಲ್ಲಿ ಮೂವರು ಸಂಚರಿಸುತ್ತಿದ್ದ ಬೈಕ್ ತಿರುವೊಂದರಲ್ಲಿ ಸ್ಕಿಡ್ ಆಗಿ ರಸ್ತೆಯಂಚಿನ ಮರಕ್ಕೆ ಅಪ್ಪಳಿಸಿದೆ. ಅಪಘಾತದಲ್ಲಿ ಬೈಕಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Join Whatsapp