ಕೆರೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಬಾಲಕಿ ಪಾರು

Prasthutha|

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ್ದು ಅವರಲ್ಲಿ ಮೂವರು ಸಾವನ್ನಪ್ಪಿ ಬಾಲಕಿ ಪಾರಾಗಿರುವ ಘಟನೆ ಮಾಗಡಿಯ ಸೋಲೂರು ಬಳಿಯ ದಮ್ಮನಕಟ್ಟೆಯಲ್ಲಿ ನಡೆದಿದೆ.

- Advertisement -

ಘಟನೆಯಲ್ಲಿ ಸಿದ್ದಮ್ಮ (55), ಸುಮಿತ್ರಾ (30),ಹನುಮಂತರಾಜು (35) ಮೃತಪಟ್ಟವರು.

10 ವರ್ಷ ಪ್ರಾಯದ ಕೀರ್ತನಾ ಎಂಬ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ. ಕುಟುಂಬದ ಸದಸ್ಯರ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

- Advertisement -

ಮೃತದೇಹಗಳನ್ನು ನಗರದ ಆರ್.ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp