ಹಣದ‌ ಬೇಡಿಕೆ ಇಟ್ಟ ಮೂವರು ನಕಲಿ ಎಸಿಬಿ ಅಧಿಕಾರಿಗಳ ಬಂಧನ

Prasthutha|

ಕೋಲಾರ: ಹಣದ‌ ಬೇಡಿಕೆ ಇಟ್ಟಿದ್ದ‌ ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನು ಕೋಲಾರ ಗ್ರಾಮಾಂತರ ‌ಪೊಲೀಸರು ಬಂಧಿಸಿದ್ದಾರೆ.

- Advertisement -

ಬೆಳಗಾವಿಯ ಮುರಿಗಪ್ಪ, ಹಾಸನ ಜಿಲ್ಲೆ ಸಕಲೇಶಪುರದ ರಜನಿಕಾಂತ್ ಹಾಗೂ ಮಹಾರಾಷ್ಟ್ರದ ರಾಜೇಶ್ ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಈ ಮೂವರು ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ‌ ಅಧಿಕಾರಿ ನಾರಾಯಣಗೌಡ ಅವರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅನುಮಾನಗೊಂಡ ನಾರಾಯಣಗೌಡ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಈ ಮೂವರು ಆರೋಪಿಗಳ ವಿರುದ್ಧ ಇಂಥದ್ದೇ ಹಲವು ಪ್ರಕರಣಗಳು ವಿವಿಧೆಡೆ ದಾಖಲಾಗಿವೆ ಎನ್ನಲಾಗಿದೆ.

- Advertisement -

ವಿಚಾರಣೆ ವೇಳೆ ಪೊಲೀಸರಿಗೇ ಸವಾಲೆಸೆದಿರುವ ಆರೋಪಿಗಳು, ‘ನಮ್ಮನ್ನೇಕೆ ಆತಂಕವಾದಿಗಳಂತೆ ಕಾಣುತ್ತಿದ್ದೀರಿ? ಭ್ರಷ್ಟಾಚಾರ ಮಾಡಿ ದೇಶವನ್ನೇ  ಹಾಳು ಮಾಡುತ್ತಿರುವವರನ್ನು ಸುಮ್ಮನೇ ಬಿಟ್ಟಿದ್ದೀರಿ.  ಭ್ರಷ್ಟಾಚಾರ ಬಯಲಿಗೆಳೆವುದು ನಮ್ಮ ಉದ್ದೇಶವಾಗಿತ್ತು’ ಎಂದು  ಹೇಳಿದ್ದಾರೆ.

Join Whatsapp