ಕಾಶ್ಮೀರದಲ್ಲಿ ಮುಂದುವರಿದ ಹಿಂಸಾಚಾರ: ಮೂವರನ್ನು ಹತ್ಯೆಗೈದ ಭದ್ರತಾ ಪಡೆ

Prasthutha|

ಅನಂತನಾಗ್: ಮೂವರು ಯುವಕರನ್ನು ಭದ್ರತಾ ಪಡೆಗಳು ಕಾರಿನಿಂದ ಕೆಳಗಿಳಿಸಿ ಹತ್ಯೆ ನಡೆಸಿದ ದಾರುಣ ಘಟನೆ ಜಮ್ಮು ಕಾಶ್ಮೀರದ ಶ್ರೀನಗರದಿಂದ ವರದಿಯಾಗಿದೆ.

- Advertisement -

ಶ್ರೀನಗರದ ರಾಮ್ ಬಾಗ್ ಎಂಬಲ್ಲಿ ಬುಧವಾರ ಮೂವರು ಯುವಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಾರ್ವಜನಿಕರ ಈ ಆರೋಪವನ್ನು ಭದ್ರತಾ ಪಡೆಗಳು ನಿರಾಕರಿಸಿದ್ದು, ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆ ನಡೆಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾವಣೆಗೊಂಡಿದ್ದು, ಅಲ್ಲಿ ರಕ್ತದ ಕಲೆಗಳು ಗೋಚರಿಸಿವೆ.

ಈ ನಡುವೆ ಕಾಶ್ಮೀರದ ಶ್ರೀನಗರದ ರಾಮ್ ಭಾಗ್ ಎಂಬಲ್ಲಿನ ರಸ್ತೆಯೊಂದರಲ್ಲಿ ಮಹಿಳೆಯೊಬ್ಬರು ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಧ್ಯ ಕಾಶ್ಮೀರದಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರಿದಿದ್ದು, ಕಳೆದ ವಾರ ಹೈದರ್ ಪೊರಾ ಎಂಬಲ್ಲಿ ನಡೆದ ಎನ್ಕೌಂಟರ್ ನಲ್ಲಿ 4 ಮಂದಿ ಕಾಶ್ಮೀರದ ನಿವಾಸಿಗಳನ್ನು ಹತ್ಯೆ ನಡೆಸಲಾಗಿತ್ತು.

Join Whatsapp