RSS ಅನ್ನು ಮುಗಿಸುತ್ತೇನೆ ಎಂದವರೇ ಮುಗಿದು ಹೋಗಿದ್ದಾರೆ ಎಂದ ಸಿಟಿ ರವಿ : ಸಂಸದರ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಟೀಕೆ

Prasthutha|

ಹಾಸನ: ಆರೆಸ್ಸೆಸ್ಸನ್ನು ಮುಗಿಸುತ್ತೇನೆ ಎಂದು ಹೇಳಿದವರು ಮುಗಿದು ಹೋಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು ಮುಗಿದು ಹೋಗಿದ್ದಾರೆ ಅಂದರೆ ಸಂಸದರು ಯಾರನ್ನು ಉದ್ದೇಶಿಸಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

- Advertisement -

ಹಾಸನದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್‌ ದೇಶಭಕ್ತ ಸಂಘಟನೆ. ಅದಕ್ಕೆ ಸಿದ್ದರಾಮಯ್ಯನವರ ಸರ್ಟಿಫಿಕೇಟ್‌ ಬೇಕಿಲ್ಲ. ಆರೆಸ್ಸೆಸ್ಸನ್ನು ಮುಗಿಸ್ತೇನೆ ಎಂದು ಹೇಳಿದವರು ಮುಗಿದು ಹೋಗಿದ್ದಾರೆ ಎಂದು ಹೇಳಿದರು. ಈ ದೇಶದ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ಆರೆಸ್ಸೆಸ್‌ನವರೇ ಎಂದು ಹೇಳೋದಾದ್ರೆ. ನಿಮಗೂ ಟಿಪ್ಪುಗೆ, ಮೊಘಲರಿಗೆ ಏನು ಸಂಬಂಧ? ಇದೆ ಎಂದು ಹೇಳಿ. ಆರೆಸ್ಸೆಸ್‌ ಹುಟ್ಟಿದ್ದು ನಾಗಪುರದಲ್ಲಿ. ಆದರೆ ಕಾಂಗ್ರೆಸ್‌ ಸಂಸ್ಥಾಪಕ ಎ.ಒ ಹ್ಯೂಮ್‌ ಯಾರು? ಎಂದು ಪ್ರಶ್ನೆ ಮಾಡಿ ಮಾತಿನ ಭರದಲ್ಲಿ ‘ಪ್ರಶ್ನಿಸಿದವರೇ ಮುಗಿದು ಹೋಗಿದ್ದಾರೆ’ ಎಂದು ನಾಲಗೆ ಹರಿಯಬಿಟ್ಟಿದ್ದು ಇದೀಗ ಸಾಮಾಜಿಕ ವಲಯದಾದ್ಯಂತ ವಿವಾದವಾಗುತ್ತಿದೆ.

RSS ಸಿದ್ದಾಂತವೇ ಭಯ ಹುಟ್ಟಿಸುವುದು ಎಂದು ಸಿದ್ದರಾಮಯ್ಯ ಇಂದು ಹೇಳಿದ್ದು ಅದಕ್ಕೆ ಪೂರಕವಾದ ಸಂಸದರ ಭಯೋತ್ಪಾದನಾ ಹೇಳಿಕೆ ಚರ್ಚೆಯಾಗುತ್ತಿದೆ

Join Whatsapp