ತುರುವೇಕೆರೆ: ಮೂರು ಬೈಕ್ ಡಿಕ್ಕಿ; ನಾಲ್ಕುಸಾವು

Prasthutha|

ತುಮಕೂರು: ಮೂರು ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ತುರುವೇಕೆರೆ ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ನಡೆದಿದೆ.

- Advertisement -

ಬುಕ್ಕಾಪಟ್ಟದ ಭೂತೇಶ್ (25), ಶಶಿಧರ್ (26), ನವೀನ್ (28) ಹಾಗೂ ಸಿ.ಎಸ್.ಪುರದ ರಂಗನಾಥ್ (24) ಮೃತ ದುರ್ದೈವಿಗಳು.

ಗಾಯಗೊಂಡ ನವೀನ್ ಎಂಬಾತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಆತನ ಸ್ಥಿತಿ ಗಂಭೀರವಾಗಿದೆ.

- Advertisement -

ಸಣ್ಣಪುಟ್ಟ ಗಾಯಗೊಂಡ  ರವೀಶ ಹಾಗೂ  ರಂಗನಾಥ್ ಅವರು ಸ್ನೇಹಿತರಾಗಿದ್ದು  ಜಲದಿಗೆರೆ ದೇವಸ್ಥಾನದಲ್ಲಿ ಪೂಜೆ ಮುಗಿದ ನಂತರ ಯಡಿಯೂರು ದೇವಾಲಯಕ್ಕೆ ಹೋಗಿ ಊರಿಗೆ ಮರಳುವ ವೇಳೆ  ತುರುವೇಕೆರೆ ತಾಲೂಕು ಶೆಟ್ಟಿಗೊಂಡನಹಳ್ಳಿ ಬಳಿ ಸಿ ಎಸ್ ಪುರದ ಕಲ್ಲೂರು ಕಡೆಯಿಂದ ಅತಿ ವೇಗವಾಗಿ  ಬಂದ ಸ್ಪ್ಲೆಂಡರ್ ಬೈಕ್ ಡಿಕ್ಕಿ ಹೊಡೆದು ಈ ದುರ್ಘಟನೆ  ನಡೆದಿದೆ.

ಮೃತದೇಹಗಳ  ಮರಣೋತ್ತರ ಪರೀಕ್ಷೆಯನ್ನು ತುರುವೇಕೆರೆ  ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ ಸಂಬಂಧಿಕರಿಗೆ ನೀಡಲಾಗಿದ್ದು ಮಾಯಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp