ಮಾಧ್ಯಮಗಳು “ಸಿಡಿ ಲೇಡಿ” ತಲೆಬರಹದಲ್ಲಿ ವರದಿ ಪ್ರಕಟಿಸದಂತೆ ಸಂತ್ರಸ್ತೆ ಯುವತಿಯ ನ್ಯಾಯವಾದಿ ವಿನಂತಿ

Prasthutha|

ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಯನ್ನು ಸಿಡಿ ಲೇಡಿ ಎಂದು ಕರೆಯಬೇಡಿ ಎಂದು ಯುವತಿ ಪರ ನ್ಯಾಯವಾದಿ ಕೆಎನ್ ಜಗದೀಶ್ ಮಹಾದೇವ್ ವಿನಂತಿ ಮಾಡಿದ್ದಾರೆ.

- Advertisement -

ಮೆಡಿಕಲ್‌ ಚೆಕ್ ಅಪ್ ಬಳಿಕ ಪೊಲೀಸರು ಯುವತಿಯನ್ನು ಆಡುಗೋಡಿಯಲ್ಲಿ SIT ಟೆಕ್ನಿಕಲ್ ವಿಂಗ್ ಗೆ ಕರೆದುಕೊಂಡು ಬಂದು ಯುವತಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ಈ ಸಂದರ್ಭ  ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಮಹಾದೇವ್, ದಯವಿಟ್ಟು ಮಾಧ್ಯಮಗಳೊಂದಿಗೆ ವಿನಂತಿಸಿಕೊಳ್ಳುತ್ತೇನೆ. ಯುವತಿಯನ್ನು ಮಾಧ್ಯಮಗಳು “ಸಿಡಿ…” ಎಂದು ಬಳಕೆ ಮಾಡುತ್ತಿದೆ. ನನ್ನನ್ನು “ಸಿಡಿ…. ವಕೀಲರು” ಎಂಬ ತಲೆಬರಹ ನೀಡಿ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಇದು ಸರಿಯಲ್ಲ. ಈ ರೀತಿಯ ತಲೆಬರಹ ನೀಡಿ ಸುದ್ದಿ ಮಾಡದಿರುವಂತೆ ನಾನು ಮಾಧ್ಯಮಗಳೊಂದಿಗೆ ವಿನಂತಿಸಿಕೊಳ್ಳುತ್ತೇನೆ ಎಂದು ಜಗದೀಶ್ ವಿನಂತಿಸಿಕೊಂಡಿದ್ದಾರೆ.

ಜಗದೀಶ್ ಮಾತನಾಡುತ್ತಾ, ವಾಯ್ಸ್ ಬಗ್ಗೆ ಮತ್ತು ಪ್ರಕರಣಕ್ಕೆ ಕೆಲವೊಂದು ಪೂರಕವಾದ ಮಾಹಿತಿಯನ್ನು ಪಡೆಯಲು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.

Join Whatsapp