ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯ ಮುಂದುವರಿಯಬೇಕು: ಸಿ ಎಂ ಬೊಮ್ಮಾಯಿ

Prasthutha|

ಬೆಂಗಳೂರು: ಹೃದಯ ವಿಶಾಲತೆ ಕನ್ನಡಿಗರ ಹುಟ್ಟುಗುಣ. ಕನ್ನಡ ನಾಡಿಗೆ ಭಾರತ ಭವಿಷ್ಯ ಬರೆಯುವ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.  ವಿಶ್ವದಲ್ಲೇ ಕನ್ನಡ ನಾಡು ಅತಿ ಶ್ರೇಷ್ಠವಾದದ್ದು. ಕನ್ನಡಕ್ಕೆ ನೈತಿಕ ಮೌಲ್ಯ ಕೊಟ್ಟವರು ಕುವೆಂಪು. ರಾಷ್ಟ್ರದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡ ಭಾಷೆ ಎಂದು ಹೇಳಿದರು.

ವರ್ಷದ 365 ದಿನವೂ ಕೃಷಿ ನಡೆಯುತ್ತಿರುವ  ನಮ್ಮ ರಾಜ್ಯದಲ್ಲಿ  10 ಕೃಷಿ ವಲಯಗಳಿವೆ. ಎಲ್ಲಾ ಕ್ಷೇತ್ರಗಳಲ್ಲಿ ರಾಜ್ಯ ಮುಂದಿರಬೇಕು. ಕನ್ನಡಿಗರು ಹೆಚ್ಚು ಲಾಭ ಪಡೆಯಬೇಕು ಎಂದು ಹೇಳಿದರು.

Join Whatsapp