ಎಸ್ ಡಿಪಿಐ ಅರ್ಕುಳ ಗ್ರಾಮ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅರ್ಕುಳ ಗ್ರಾಮ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ  ಕಾರ್ಯಕ್ರಮವು ಅರ್ಕುಳ ಗ್ರಾಮ  ಸಮೀತಿ ಅಧ್ಯಕ್ಷ ರಾದ  ರಶೀದ್ ಅರ್ಕುಳ ಅಧ್ಯಕ್ಷತೆ ಯಲ್ಲಿ  ನಡೆಯಿತು.

- Advertisement -

ಉತ್ತರ ವಿಧಾನಸಭಾ ಅಧ್ಯಕ್ಷರಾದ ಯಾಸೀನ್ ಅರ್ಕುಳ ರವರು ಕರ್ನಾಟಕದ ಸೌಂದರ್ಯ ವನ್ನು ಮುಖ್ಯ ಭಾಷಣದಲ್ಲಿ ಮಂಡಿ ಸಿದರು. ವೇದಿಕೆಯಲ್ಲಿ ಗ್ರಾಮ ಸಮಿತಿ ಕಾರ್ಯದರ್ಶಿ ಇಕ್ಬಾಲ್ ವಳಚ್ಚಿಲ್ ಪದವು, ಪಂಚಾಯತ್ ಸದಸ್ಯರಾದ ಶಬೀರ್,ಐಸಮ್ಮ ಅಡ್ಯಾರ್, ಆಸೀಫ್, ಮಿಸ್ರಿಯ,ಮಜೀದ್ ಹಮೀದ್ ಅಡ್ಯಾರ್, ಝೀನತ್  ಭಾಗವಹಿಸಿದ್ದರು.

ಅಡ್ಯಾರ್ ಬ್ಲಾಕ್ ಅಧ್ಯಕ್ಷರಾದ ಮುಹಮ್ಮದ್ ರವರು ಧನ್ಯವಾದ ವನ್ನು ನೆರವೇರಿಸಿದರು. ರಾಷ್ಟಗೀತೆ ಯೊಂದಿಗೆ ಕಾರ್ಯಕ್ರಮ ವನ್ನು ಮುಕ್ತಾಯ ಗೊಳಿಸಲಾಯಿತು.

- Advertisement -

Join Whatsapp