ವರನ ಕಣ್ಣಿಗೆ ಮೆಣಸಿನ ಹುಡಿ ಎರಚಿ ವಧುವನ್ನು ಅಪಹರಿಸಲು ವಿಫಲ ಯತ್ನ ನಡೆಸಿದ ಹೆತ್ತವರು!

Prasthutha|

ವೀಡಿಯೋ ವೈರಲ್

- Advertisement -

ಆಂಧ್ರಪ್ರದೇಶ: ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.ವಧುವನ್ನು ಎಳೆದೊಯ್ಯಲು ಯತ್ನಿಸಿದ್ದು ಆಕೆಯ ಹೆತ್ತವರೇ ಆಗಿದ್ದಾರೆ.

ಘಟನೆಯ ವೀಡಿಯೊ ವೈರಲ್ ಆಗಿದ್ದು, ವಧುವನ್ನು ಆಕೆಯ ಚೀರಾಟದ ನಡುವೆಯೇ ಎಳೆದಾಡಿರುವುದು ಕಂಡುಬರುತ್ತದೆ.ವರನ ಕುಟುಂಬಸ್ಥರ ಮೇಲೂ ವಧುವಿನ ಮನೆಯವರು ಮೆಣಸಿನ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ. ವರನ ಸಂಬಂಧಿಕರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

ಆಂಧ್ರಪ್ರದೇಶದ ನರಸರಾವ್‌ಪೇಟೆಯ ಕಾಲೇಜೊಂದರಲ್ಲಿ ಪಶುವೈದ್ಯಕೀಯ ವಿಜ್ಞಾನದಲ್ಲಿ ಡಿಪ್ಲೊಮಾ ಓದುತ್ತಿದ್ದಾಗ ಸ್ನೇಹಾ ಮತ್ತು ವೆಂಕಟನಂ ನಡುವೆ ಪ್ರೀತಿ ಬೆಳೆದಿದೆ. ಏಪ್ರಿಲ್ 13ರಂದು ವಿಜಯವಾಡದ ದುರ್ಗಾ ದೇವಸ್ಥಾನದಲ್ಲಿ ವಿವಾಹವಾಗಿ ನಂತರ ಸ್ನೇಹಾ ವೆಂಕಟನಂ ಮನೆಗೆ ತೆರಳಿದ್ದಾರೆ. ಬಳಿಕ ವೆಂಕಟನಂ ಕುಟುಂಬ ಸದಸ್ಯರು ಏಪ್ರಿಲ್ 21ರಂದು ವಿವಾಹ ಸಮಾರಂಭ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ನೇಹಾ ಅವರ ಕುಟುಂಬದವರನ್ನೂ ಆಹ್ವಾನಿಸಲಾಗಿತ್ತು.

ಸಮಾರಂಭಕ್ಕೆ ಇತರ ಸಂಬಂಧಿಕರಾದ ಚರಣ್ ಕುಮಾರ್, ಚಂದು ಮತ್ತು ನಕ್ಕ ಭರತ್ ಮುಂತಾದವರ ಜೊತೆ ನುಗ್ಗಿದ ಸ್ನೇಹಾಳ ತಾಯಿ ಪದ್ಮಾವತಿ ವರನ ಕುಟುಂಬದವರಿಗೆ ಮೆಣಸಿನ ಪುಡಿಯನ್ನು ಎರಚಿದ್ದಾರೆ. ಬಳಿಕ ಮಗಳನ್ನು ಅಪಹರಿಸಿ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.

ವರ, ಆತನ ಕುಟುಂಬ ಹಾಗೂ ಆತನ ಸ್ನೇಹಿತರು ಇದನ್ನು ವಿರೋಧಿಸಿ ಅಪಹರಣ ಯತ್ನವನ್ನು ವಿಫಲಗೊಳಿಸಿದ್ದಾರೆ. ಘರ್ಷಣೆಯಲ್ಲಿ ವರನ ಸಂಬಂಧಿಕರಲ್ಲೊಬ್ಬರಾದ ವೀರಬಾಬು ಗಂಭೀರವಾಗಿ ಗಾಯಗೊಂಡಿದ್ದಾರೆ.

Join Whatsapp