ನಿಜವಾದ ಅಹಿಂದ ಪಕ್ಷವೆಂದರೆ SDPI ಮಾತ್ರವಾಗಿದೆ: ಶ್ರೀನಿವಾಸ್‌ ಹಿರಿಯೂರು

Prasthutha|

ಬೆಂಗಳೂರು: ಸಿರಾ ಭಾಗದ ಕಾಡುಗೊಲ್ಲ ಸಮುದಾಯದ ನಾಯಕ ನಿವೃತ್ತ ಸರ್ಕಾರಿ ಅಧಿಕಾರಿ ಶ್ರೀನಿವಾಸ್‌ ಹಿರಿಯೂರು ಅವರು ಎಸ್‌ಡಿಪಿಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷದ ರಾಜ್ಯ ಕಛೇರಿ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್‌ ಮಜೀದ್‌ ಮೈಸೂರು ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.

- Advertisement -

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಪ್ರಸಾದ್‌ ಅವರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್‌ ಕೊಡ್ಲಿಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯ ಅಮ್ಜದ್‌ ಖಾನ್‌ ಅವರು ಜೊತೆಗಿದ್ದರು.

- Advertisement -

Join Whatsapp