ಬೆಳಗ್ಗೆ ಬಿಜೆಪಿ ಸೇರಿ ಸಂಜೆ ಮತ್ತೆ ಕಾಂಗ್ರೆಸ್​ಗೆ ಮರಳಿದ ಗ್ರಾ.ಪಂ ಸದಸ್ಯೆ

Prasthutha|

ಶಿವಮೊಗ್ಗ: ಬೆಳಗ್ಗೆ ಬಿಜೆಪಿ ಸೇರಿದ್ದ ಗ್ರಾಮಪಂಚಾಯತ್​ ಸದಸ್ಯೆ ಮತ್ತೆ ಸಂಜೆ ಮರಳಿ ಕಾಂಗ್ರೆಸ್​ ಗೆ ಸೇರ್ಪಡೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

- Advertisement -

ಹೊಸನಗರ ತಾಲೂಕು ಅರಸಾಳು ಗ್ರಾಮಪಂಚಾಯತ್​ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪೂರ್ಣಿಮಾ, ಸಚಿವ ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ನಿನ್ನೆ ಸಂಜೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಮತ್ತೆ ಮರಳಿ ಕಾಂಗ್ರೆಸ್​​ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Join Whatsapp