ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಇಬ್ಬರು ಪ್ರತ್ಯಕ್ಷ ಸಾಕ್ಷಿದಾರರು ಕೋರ್ಟ್’ಗೆ ಹಾಜರು

Prasthutha|

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಕೋಕಾ ವಿಶೇಷ ನ್ಯಾಯಾಲಯಕ್ಕೆ ಇಬ್ಬರು ಪ್ರತ್ಯಕ್ಷ ಸಾಕ್ಷಿದಾರರು ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಜುಲೈ 4 ರಿಂದ 8 ರವರೆಗೆ ವಿಚಾರಣೆ ನಡೆಯುತ್ತಿದ್ದು, ಎರಡು ದಿನಗಳ ಹಿಂದೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಿದ್ದರು.

ಗೌರಿ ಹತ್ಯೆಯನ್ನು ಮೊದಲು ನೋಡಿದ್ದ ಕೇಬಲ್ ಅಪರೇಟರ್ ಪ್ರಕಾಶ್, ಮೇಸ್ತ್ರಿ ಮನೋಹರ್ ಎಂಬವರು ಖುದ್ದು ಕೋರ್ಟ್’ಗೆ ಹಾಜರಾಗಿ ತಾವು ನೋಡಿದ್ದನ್ನು ಸಂಪೂರ್ಣವಾಗಿ ಹೇಳಿಕೆ ನೀಡಿದ್ದಾರೆ.

- Advertisement -

ನಾನು ಕೇಬಲ್ ಅಪರೇಟರ್ ಆಗಿದ್ದು, ಮಾಲಕ ರವಿಕುಮಾರ್ ಅವರು ನನಗೆ ಆರ್. ಆರ್. ನಗರದ ಗೌರಿ ಅವರ ಮನೆಗೆ ಟಿವಿಯ ಇಂಗ್ಲಿಷ್ ಚಾನೆಲ್’ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿನ ಹಿನ್ನೆಲೆಯಲ್ಲಿ, ಅದನ್ನು ಪರಿಶೀಲಿಸುವಂತೆ ಸೂಚಿಸಿದ್ದರು. ಇದರಂತೆ ಆ ದಿನ ಸಂಜೆ ಬೈಕ್’ನಲ್ಲಿ ಅವರ ಮನೆಗೆ ಹೋಗಿದ್ದೆ. ಅವರ ಮನೆಯ ಬಳಿಕೆ ಹೋಗುತ್ತಿದ್ದಂತೆ ಗೌರಿ ಮನೆಯಿಂದ ಏನೋ ಶಬ್ದ ಬಂದಿದೆ ಎಂದು ಸ್ಥಳೀಯರು ಹೇಳಿದ್ದರು. ಆಗ ಗೇಟ್ ಮುಂಭಾಗದಲ್ಲಿ ನಿಂತಿದ್ದ ಕಾರಿನ ಡೋರ್ ಓಪನ್ ಆಗಿದ್ದನ್ನು ಗಮನಿಸಿದ್ದೆ. ಗೇಟ್ ಒಳ ಹೋಗುತ್ತಿದ್ದಂತೆ ಮನೆ ಮುಂಭಾಗದಲ್ಲಿ ಗೌರಿ ಬಿದ್ದಿದ್ದರು. ಹತ್ತಿರ ಹೋಗುತ್ತಿದ್ದಂತೆ ಆಕೆಯ ಎದೆಯ ಭಾಗ ರಕ್ತದಿಂದ ತುಂಬಿತ್ತು’ ಎಂದು ಪ್ರಕಾಶ್ ಅವರು ವಿಶೇಷ ಅಭಿಯೋಜಕ ಎಸ್.ಬಾಲನ್ ಮುಂದೆ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಗೌರಿ ಲಂಕೇಶ್ ಮನೆ ಮುಂಭಾಗದ ಅಪಾರ್ಟ್’ಮೆಂಟ್ ಔಟ್ ಹೌಸ್’ನಲ್ಲಿ ಕುಟುಂಬದೊಂದಿಗೆ ವಾಸಿಸುವ ಮೇಸ್ತ್ರಿ ಮನೋಹರ್ ಎಂಬವರೂ ಕೋರ್ಟ್ ಮುಂದೆ ಸಾಕ್ಷಿ ಹೇಳಿದ್ದಾರೆ. ಅಂದು ರಾತ್ರಿ ಕೆಲವು ಮುಗಿಸಿ ಮನೆಯಲ್ಲಿ ಆಹಾರ ಸೇವಿಸುತ್ತಿದ್ದಾಗ ಗೌರಿ ಮನೆಯಿಂದ ಏನೋ ಶಬ್ದವಾಗಿದ್ದು, ತಕ್ಷಣ ಬಾಲ್ಕನಿಗೆ ತೆರಳಿ ನೋಡಿರುವುದಾಗಿ ಮನೋಹರ್ ಅವರು ನ್ಯಾಯಾಧೀಶರಿಗೆ ತಿಳಿಸಿದ್ದಾರೆ.

Join Whatsapp