ಕಾಂಗ್ರೆಸ್ ಪಕ್ಷ ಮುಳುಗುತ್ತಿದೆ; ಸಿದ್ದರಾಮಯ್ಯ ಪಾರ್ಟಿಯಿಂದ ಸಸ್ಪೆಂಡ್ ಆಗಲಿದ್ದಾರೆ: ಮುನಿರತ್ನ

Prasthutha|

ಬೆಂಗಳೂರು: 2023 ರ ವೇಳೆಗೆ ಸಿದ್ದರಾಮಯ್ಯರನ್ನು ಕಾಂಗ್ರೆಸ್ ನಿಂದ ಹೊರಗಿಡುತ್ತಾರೆ. ಈಗಾಗಲೇ ಅದಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.

- Advertisement -

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮುಳುಗಿ ಹೋಗಿದೆ. ನೆಕ್ಸ್ಟ್ ಟಾರ್ಗೆಟ್ ಸಿದ್ದರಾಮಯ್ಯ. ರಾಮಕೃಷ್ಣ ಹೆಗಡೆ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. 1994ರಲ್ಲಿ ಆಗಿದ್ದು 2023 ಡಿಸೆಂಬರ್ ನಲ್ಲಿ ಮರುಕಳಿಸುತ್ತದೆ   2023ಕ್ಕೆ ಸಿದ್ದರಾಮಯ್ಯರನ್ನು ಪಾರ್ಟಿಯಿಂದಲೇ ಸಸ್ಪೆಂಡ್ ಮಾಡಿಸುತ್ತಾರೆ ಎಂದು ಹೇಳಿದರು.

ಪಿಎಸ್ ಐ ನೇಮಕ ಅಕ್ರಮ ಪ್ರಕರಣದ ಬಗ್ಗೆ ಕಾಂಗ್ರೆಸ್ ಯಾವುದೇ ಆಧಾರವಿಲ್ಲದೆ ನಿರಂತರ ಆರೋಪ ಮಾಡುತ್ತಿದೆ. ಊಹಾಪೋಹದ ಹೇಳಿಕೆ ನೀಡುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದು, ಅಧಿಕಾರಕ್ಕೆಬರಲ್ಲ ಎಂಬ ಭಯದಿಂದ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

Join Whatsapp