ತಣ್ಣೀರುಬಾವಿ : ಮನೆಯ ಮೇಲ್ಛಾವಣಿ ಕುಸಿತ ; ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಿದ ಇನಾಯತ್ ಅಲಿ ನೇತೃತ್ವದ ಕಾಂಗ್ರೆಸ್ ಮುಖಂಡರು

Prasthutha|

ಮಂಗಳೂರು: ನಗರದ ಹೊರವಲಯದ ತಣ್ಣೀರುಬಾವಿ‌ ಮೈದಾನದ ಬಳಿ ಮಳೆಯಿಂದಾಗಿ ಮಂಗಳವಾರ ರಾತ್ರಿ ಮನೆಯೊಂದರ ಮೇಲ್ಛಾವಣಿ ಬಿದ್ದಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನಿರ್ದೇಶನದಂತೆ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಿದರು.

- Advertisement -

ಇನಾಯತ್ ಅಲಿ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರವನ್ನು ಒದಗಿಸಲು ತಿಳಿಸಿದರು. ಈ ಸಂದರ್ಭ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಪಣಂಬೂರು ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಸ್ಥಳೀಯ ಮುಖಂಡರಾದ ಸುಮಂತ್ ತಣ್ಣೀರುಬಾವಿ, ವಾಸಿಂ, ಲಕ್ಷ್ಮಣ್ ಸುವರ್ಣ, ಫಿಲಿಪ್ ಉಪಸ್ಥಿತರಿದ್ದರು.

Join Whatsapp