ವಿವಾಹಿತ ಮಹಿಳೆಯ ಜೊತೆ ಮಠ ಬಿಟ್ಟು ಪರಾರಿಯಾದ ಸ್ವಾಮೀಜಿ !

Prasthutha|

ರಾಮನಗರ: ಪ್ರೀತಿಸಿದ ಯುವತಿಗಾಗಿ ಸ್ವಾಮೀಜಿಯೊಬ್ಬರು ಮಠ ಬಿಟ್ಟು ಪರಾರಿಯಾದ ಘಟನೆ ರಾಮನಗರದಲ್ಲಿ ನಡೆದಿದೆ.

- Advertisement -


ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮೀಜಿಗೆ ಎರಡು ವರ್ಷದ ಹಿಂದೆ ಪಟ್ಟಾಭಿಷೇಕವಾಗಿತ್ತು. “ನಾನು ಮಠ ಬಿಟ್ಟು ಹೋಗುತ್ತಿದ್ದೇನೆ. ಮತ್ತೆ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ಪತ್ರದಲ್ಲಿ ಬರೆದು ನಾಪತ್ತೆಯಾಗಿದ್ದಾರೆ.


ಇನ್ನು ಸ್ವಾಮೀಜಿ ಪ್ರೀತಿಸುತ್ತಿದ್ದ ಹುಡುಗಿಗೆ ಕಳೆದ ಒಂದೂವರೆ ತಿಂಗಳಿನಿಂದ ವಿವಾಹವಾಗಿತ್ತು. ಈ ಹಿಂದೆ ಕಂಬಾಳು ಮಠದಲ್ಲಿರುವಾಗ ಸ್ವಾಮೀಜಿಗೆ ಆಕೆಯೊಂದಿಗೆ ಪ್ರೇಮಾಂಕುರವಾಗಿತ್ತು. ವಿವಾಹಿತ ಮಹಿಳೆಯ ಜೊತೆ ಸ್ವಾಮೀಜಿ ಓಡಿ ಹೋಗುವ ಸಾಧ್ಯತೆ ಇದ್ದು, ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Join Whatsapp