ಕುಸ್ತಿಯಲ್ಲಿ ರವಿ ದಹಿಯಾ ಸೋತಿದ್ದರಿಂದ ಭಾವುಕರಾದ ಜೈಲಿನಲ್ಲಿರುವ ಸುಶೀಲ್ ಕುಮಾರ್

Prasthutha|

ಹೊಸದಿಲ್ಲಿ: ಕುಸ್ತಿ ಫೈನಲ್‌ನಲ್ಲಿ ರವಿ ದಹಿಯಾ ಸೋತಿದ್ದರಿಂದ ತಿಹಾರ್ ಜೈಲಿನಲ್ಲಿರುವ ಸುಶೀಲ್ ಕುಮಾರ್ ಭಾವುಕರಾದರೆಂದು ವರದಿಯಾಗಿದೆ.

- Advertisement -

ಕೊಲೆ ಪ್ರಕರಣವೊಂದರಲ್ಲಿ ತಿಹಾರ್ ಜೈಲಿನಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್, ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಜಾವೂರ್ ಉಗುವ್ ವಿರುದ್ಧ ರವಿ ದಹಿಯಾ 4-7 ಅಂತರದಿಂದ ಸೋತಿದ್ದನ್ನು ನೋಡಿ ಭಾವುಕರಾಗಿದ್ದಾರೆ. ಆದರೆ ದಹಿಯಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ.

ಸುಶೀಲ್ ಕುಮಾರ್ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ ಭಾರತದ ಇನ್ನೊಬ್ಬ ಕುಸ್ತಿಪಟುವಾಗಿದ್ದಾರೆ. 2012 ರ ಲಂಡನ್ ನಲ್ಲಿ ಅವರು ಬೆಳ್ಳಿ ಗೆದ್ದಿದ್ದರು. 2008 ರ ಬೀಜಿಂಗ್ ಕ್ರೀಡಾಕೂಟದಲ್ಲಿ ಸುಶೀಲ್ ಕಂಚು ಗೆದ್ದಿದ್ದರು.

Join Whatsapp