ಸುರತ್ಕಲ್: ಸಂಘಪರಿವಾರದಿಂದ ಹತ್ಯೆಗೀಡಾಗಿದ್ದ ಫಾಝಿಲ್ ಸಹೋದರನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

Prasthutha|

ಸುರತ್ಕಲ್: ಇತ್ತೀಚೆಗೆ ಸಂಘಪರಿವಾರದಿಂದ ಹತ್ಯೆಗೀಡಾಗಿದ್ದ ಫಾಝಿಲ್ ಅವರ ಸಹೋದರನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಕಾಟಿಪಳ್ಳದ ಗಣೇಶ್’ಪುರ ಎಂಬಲ್ಲಿ ನಡೆದಿದೆ.

- Advertisement -

ಫಾಝಿಲ್ ಅವರ ಸಹೋದರ ಆದಿಲ್ ಎಂಬವರಿಗೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿದ ಸುರತ್ಕಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

ಕೆಲವು ದಿನಗಳ ಹಿಂದೆ ತುಮಕೂರಿನಲ್ಲಿ ಮಾತನಾಡಿದ ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್, ‘ಫಾಝಿಲ್ ಹತ್ಯೆ ಮಾಡಿಸಿದ್ದು ನಾವೇ, ಮೈಸೂರಿನ ಜೈಲಿನಲ್ಲಿ ಹತ್ಯೆ ಮಾಡಿದ್ದು ನಮ್ಮ ಎದೆಗಾರಿಕೆ’ ಎಂದು ಕೊಲೆಯ ಸಮರ್ಥನೆ ಮಾಡುತ್ತಾ ತಮ್ಮ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇರುವುದೇ ಮುಸ್ಲಿಮರ ನರಮೇಧ ನಡೆಸಲು ಎಂಬ ರೀತಿಯಲ್ಲಿ ಬಹಿರಂಗ ಭಾಷಣ ಮಾಡಿ ಭಯದ ವಾತಾವರಣ ಸೃಷ್ಟಿಸಿದ್ದರು.

Join Whatsapp