ಟೋಲ್ ಗೇಟ್ ವಿರೋಧಿ ಹೋರಾಟದಲ್ಲಿ ಬಂಧನಕ್ಕೊಳಗಾದ ಆಸಿಫ್ ಆಪತ್ಭಾಂದವ ಬಿಡುಗಡೆ

Prasthutha|

ಮಂಗಳೂರು: ಸುರತ್ಕಲ್ ನಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹದ ವಿರುದ್ಧ ಕಳೆದ 15 ದಿನಗಳಿಂದ ಟೋಲ್‌ಗೇಟ್ ಪಕ್ಕದಲ್ಲಿ ನ್ಯಾಯಯುತವಾಗಿ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ಆಸಿಫ್ ಆಪತ್ಭ್ಬಾಂದವರನ್ನು ಸೋಮವಾರ ಪೋಲಿಸರು ಬಂಧಿಸಿದ್ದರು.
ಬಂಧನದಿಂದ ಬಿಡುಗಡೆಗೊಳಿಸುವ ವಿಚಾರವಾಗಿ ಎಸ್ ಡಿಪಿಐ ನಿಯೋಗವು ಪೊಲೀಸ್ ಆಯುಕ್ತರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ಹೋರಾಟಗಾರ ಆಸಿಫ್ ಆಪತ್ಭ್ಬಾಂದವರನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅಬೂಬಕ್ಕರ್ ಕುಳಾಯಿ, ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ,ಯಾಸೀನ್ ಅರ್ಕುಳ, ದಾವೂದ್, ತೌಸೀಫ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp