ದೇಗುಲ ಮಠದಿಂದ ನಾಪತ್ತೆಯಾದ ವಿದ್ಯಾರ್ಥಿಗಳು ವಾಪಸ್

Prasthutha|

ಬೆಂಗಳೂರು: ಕನಕಪುರದ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಮರಳಿ ಬಂದಿದ್ದು ಪೊಲೀಸರು ಮತ್ತು ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

- Advertisement -

ಅತ್ತಿಬೆಲೆಯ ಅನಿಲ್ ಕುಮಾರ್ ಅವರ ಪುತ್ರ ಶಿವಕುಮಾರ್ (15), ಬಿಡಿಎ ಲೇಔಟ್ ನಿವಾಸಿ ಮಹದೇವ್ ಪುತ್ರ ಕಾರ್ತಿಕ್(15), ಅತ್ತಿಬೆಲೆಯ ಕೊಡ್ಲಿಪುರದ ಮಂಜುನಾಥ್ ಪುತ್ರ ಪ್ರತಾಪ್ (16) ನಾಪತ್ತೆಯಾಗಿ ಮತ್ತೆ ಮಠಕ್ಕೆ ವಾಪಸಾದ ವಿದ್ಯಾರ್ಥಿಗಳಾಗಿದ್ದಾರೆ.

ಕನಕಪುರದ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಕಳೆದ ನ.8ರಂದು ಎಂದಿನಂತೆ ಹಾಸ್ಟೆಲ್ ನಲ್ಲಿ ತಿಂಡಿ ಮುಗಿಸಿ ಅದೇ ಆವರಣದ ಶಾಲೆಗೆ ಎಲ್ಲಾ ಮಕ್ಕಳು ತೆರಳಿದ್ದರು. ಎಲ್ಲಾ ಮಕ್ಕಳಂತೆ 9ನೇ ತರಗತಿಯ ಈ ಮೂವರು ವಿದ್ಯಾರ್ಥಿಗಳು ಹಾಸ್ಟೆಲ್’ನಿಂದ ಶಾಲೆಗೆ ಹೊಗಿದ್ದರು. ಆದರೆ ಆ ಮೂವರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿರಲಿಲ್ಲ.

- Advertisement -

ಈ ಪ್ರಕರಣಕ್ಕೆ ಸಂಬಂಧಿಸಿ ನ. 11 ರಂದು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ವಾರ್ಡನ್ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಈ ಸುದ್ದಿ ಮಾಧ್ಯಮಗಳಲ್ಲೂ ಬಿತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮೂವರು ವಿದಾರ್ಥಿಗಳು ಮರಳಿ ಮಠದ ವಸತಿ ಶಾಲೆಗೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಈ ವಿದ್ಯಾರ್ಥಿಗಳು ತಾವು ಮೂವರು ಸ್ನೇಹಿತರ ಮನೆಗೆ ತೆರಳಿದ್ದೆವು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ವಿದ್ಯಾರ್ಥಿಗಳು ವಾಪಸ್ ಆದ ಹಿನ್ನೆಲೆಯಲ್ಲಿ ಮಠದ ಸಿಬ್ಬಂದಿ ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

Join Whatsapp