ಮಂಗಳೂರು: ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿ; ಚಿಕಿತ್ಸೆ ಫಲಿಸದೆ ಮೃತ್ಯು

Prasthutha|

ಕ್ರಿಕೆಟ್ ಬಾಲ್ ತರಲೆಂದು ತೆರಳಿದ್ದ ವೇಳೆ ಘಟನೆ

- Advertisement -

ಮಂಗಳೂರು: ಹಾಸ್ಟೆಲ್ ಮೇಲ್ಛಾವಣಿಗೆ ಕ್ರಿಕೆಟ್ ಬಾಲ್ ತರಲೆಂದು ತೆರಳಿದ್ದ ವಿದ್ಯಾರ್ಥಿಯೋರ್ವ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೂಳೂರಿನ ಚೈತನ್ಯ ಟೆಕ್ನೋ ಸ್ಕೂಲ್ ಇದರ ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ, ಬಿಜಾಪುರ ಮೂಲದ ಪ್ರಣವ್ ಎಸ್. ಮುಂಡಾಸ್ (17) ಸಾವನ್ನಪ್ಪಿದ ವಿದ್ಯಾರ್ಥಿ.

- Advertisement -

ಇಂದು ಸಾಯಂಕಾಲ ಹಾಸ್ಟೆಲ್ ಹೊರಭಾಗದ ಮೈದಾನದಲ್ಲಿ ಪ್ರಣವ್ ತನ್ನ ಸ್ನೇಹಿತರ ಜೊತೆಗೂಡಿ ಕ್ರಿಕೆಟ್ ಆಡುತ್ತಿದ್ದು, ಈ ಸಂದರ್ಭ ಕ್ರಿಕೆಟ್ ಬಾಲ್ ಹಾಸ್ಟೆಲ್ ನ ನಾಲ್ಕನೇ ಮಹಡಿಯ ಮೇಲ್ಛಾವಣಿಗೆ (ರೂಫ್ ಟಾಪ್) ಬಿದ್ದಿದೆ ಎನ್ನಲಾಗಿದೆ. ಹೀಗಾಗಿ ಬಾಲ್ ತೆರಳಲೆಂದು ಮೇಲ್ಛಾವಣಿಗೆ ಹಾಸಿದ್ದ ಶೀಟ್ ಮೇಲೆ ಪ್ರಣವ್ ನಡೆದುಕೊಂಡು ತೆರಳಿದ್ದು, ಕ್ಷಣ ಮಾತ್ರದಲ್ಲೇ ಶೀಟ್ ತುಂಡರಿದ ಪರಿಣಾಮ ಪ್ರಣವ್ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ಪ್ರಣವ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ

ಕಾವೂರು ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp