ಎಲ್ಗಾರ್‌ ಪರಿಷತ್‌ ಪ್ರಕರಣ : ಸ್ತಾನ್‌ ಸ್ವಾಮಿ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲು ಹೈಕೋರ್ಟ್‌ ನಿರ್ದೇಶನ

Prasthutha|

ನವದೆಹಲಿ : ಎಲ್ಗಾರ್‌ ಪರಿಷತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೋಜ ಜೈಲಿನಲ್ಲಿರುವ ಫಾದರ್‌ ಸ್ತಾನ್‌ ಸ್ವಾಮಿ ಅವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸುವಂತೆ ಬಾಂಬೆ ಹೈಕೋರ್ಟ್‌ ನಿರ್ದೇಶಿಸಿದೆ.

- Advertisement -

ಕೋವಿಡ್‌ ಪರಿಸ್ಥಿತಿ ಮತ್ತು ಆರೋಗ್ಯದ ಕಾರಣ ನೀಡಿ ಜಾಮೀನು ನೀಡುವಂತೆ ಕೋರಲಾದ ಅರ್ಜಿಗೆ ಸಂಬಂಧಿಸಿ ತುರ್ತು ವಿಚಾರಣೆ ಮಾಡಿದ ನ್ಯಾ. ಎಸ್.ಎಸ್.‌ ಶಿಂದೆ ಮತ್ತು ಎನ್.ಆರ್.‌ ಬೋರ್ಕರ್‌ ನ್ಯಾಯಪೀಠ ಈ ಆದೇಶ ನೀಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐಎ) ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಿದ್ಧವಿರುವುದಾಗಿ ಮತ್ತು ಅದರ ವೆಚ್ಚವನ್ನು ಭರಿಸುವುದಾಗಿ ಸ್ವಾಮಿ ಅವರ ನ್ಯಾಯವಾದಿ ಮಿಹಿರ್‌ ದೇಸಾಯಿ ಕೋರ್ಟ್‌ ಗೆ ತಿಳಿಸಿದರು.

Join Whatsapp