ಸಿಎಂ ಸ್ಥಾನಕ್ಕಾಗಿ ಹೊಸ ಬಟ್ಟೆ ಹೊಲಿಸಿದ್ದರೆ ಅದರ ಆಸೆ ಬಿಟ್ಟು ಬಿಡಿ : ವಿಶ್ವನಾಥ್ ಟಾಂಗ್

Prasthutha|

ಬೆಂಗಳೂರು : ಕರ್ನಾಟಕದಲ್ಲಿ ಸಿಎಂ ಸ್ಥಾನದ ಬದಲಾವಣೆಯ ಕುರಿತ ಚರ್ಚೆ ಸುದ್ದಿಯಲ್ಲಿರುವಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ. ಪಕ್ಷದ ನಾಯಕರು ಯಾರಾದರೂ ನಾನೇ ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿ ಹೊಸ ಬಟ್ಟೆಯನ್ನು ಹೊಲಿಸಿದ್ದರೆ ಅದರ ಆಸೆಯನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.

- Advertisement -

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್.ವಿಶ್ವನಾಥ್ ಮುಂದಿನ ಎರಡು ಎರಡು ವರ್ಷಗಳ ಕಾಲ ಯಡಿಯೂರಪ್ಪ‌ರೇ ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತಾರೆ,ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಯಡಿಯೂರಪ್ಪರ ನಾಯಕತ್ವದಲ್ಲಿಯೇ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಹಾಗೂ ಯಡಿಯೂರಪ್ಪನವರು ತಮ್ಮ ಅವಧಿಯನ್ನು ಪುರ್ಣಗೊಳಿಸಲಿದ್ದಾರೆ ಎಂದು ತಿಳಿಸಿದರು.

ದೆಹಲಿಗೆ ಪ್ರಯಾಣಿಸಿದರೆ ತಕ್ಷಣ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಅರ್ಥೈಸುವ ಅಗತ್ಯವಿಲ್ಲ, ಕೆಲವರು ಗಾಳಿ ಸುದ್ದಿಗಾಗಿಯೇ ಕಾಯುತ್ತಿರುತ್ತಾರೆ. ಯಾವುದೇ ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಆಹ್ವಾನಿಸಿಯೂ ಇಲ್ಲ ಹಾಗೂ ಯಾವುದೇ ನಾಯಕರೂ ಮುಂದಿನ ಮುಖ್ಯಮಂತ್ರಿ ಆಗುವೆನೆಂದು ಹೊಸ ಬಟ್ಟೆಯನ್ನು ಹೊಲಿಸಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.

Join Whatsapp