ಸೌದಿ ಏರ್‌ಲೈನ್ಸ್ ಮೂಲಕ ಸಿಂಗಾಪುರಕ್ಕೆ ಪಲಾಯನಗೈದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ

Prasthutha|

ಮಾಲೆ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಮಾಲ್ಡೀವ್ಸ್’ನಿಂದ ಸೌದಿ ಏರ್‌ಲೈನ್ಸ್ ವಿಮಾನದ ಮೂಲಕ ಸಿಂಗಾಪುರಕ್ಕೆ ಪಲಾಯನ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಮಾಲ್ಡೀವ್ಸ್’ನ ರಕ್ಷಣಾ ಪಡೆಯ ವಿಶೇಷ ಅಧಿಕಾರಿಗಳು ಅವರನ್ನು ವಿಮಾನ ಹತ್ತಿಸಿದ್ದು, ಈ ವೇಳೆ ಪತ್ನಿ ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದರು ಎನ್ನಲಾಗಿದೆ.

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು, ಅಧ್ಯಕ್ಷ ರಾಜಪಕ್ಸೆ ಅವರು ಬುಧವಾರ ಮುಂಜಾನೆ ಮಾಲ್ಡೀವ್ಸ್’ಗೆ ಪಲಾಯನಗೈದಿದ್ದರು. ಬುಧವಾರ ರಾತ್ರಿಯೇ ಸಿಂಗಾಪುರಕ್ಕೆ ತೆರಳಬೇಕಾದ ಅವರು ಅಭದ್ರತೆಯ ಕಾರಣದಿಂದಾಗಿ ವಿಮಾನ ಹತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Join Whatsapp