ಪ್ರಕ್ಷುಬ್ದ ಶ್ರೀಲಂಕಾ | ಮಾಜಿ ಪ್ರಧಾನಿ, ಮಿತ್ರಪಕ್ಷದವರು ದೇಶ ತೊರೆಯದಂತೆ ನಿಷೇಧ ಹೇರಿದ ನ್ಯಾಯಾಲಯ

Prasthutha|

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ, ಅವರ ಪುತ್ರ, ರಾಜಕಾರಣಿ ನಮಲ್ ಮತ್ತು 15 ಮಿತ್ರಪಕ್ಷಗಳ ಸದಸ್ಯರಿಗೆ ದೇಶ ತೊರೆಯದಂತೆ ಗುರುವಾರ ನ್ಯಾಯಾಲಯ ನಿಷೇಧ ಹೇರಿದೆ. ಈ ಮೇಲಿನವರು ಸರ್ಕಾರದ ವಿರೋಧಿ ಪ್ರತಿಭಟನಾಕಾರದ ಮೇಲೆ ಹಿಂಸಾಚಾರ ನಡೆಸಿದ ಆರೋಪದಲ್ಲಿ ನ್ಯಾಯಾಲಯ ಈ ಕ್ರಮಕ್ಕೆ ಮುಂದಾಗಿದೆ.

- Advertisement -

ರಾಜಧಾನಿ ಕೊಲಂಬೊದಲ್ಲಿ ಮ್ಯಾಜಿಸ್ಟ್ರೇಟ್ ಅವರು ಶಾಂತಿಯುತವಾಗಿ ಪತಿಭಟನೆ ನಡೆಸಿದವರ ಮೇಲೆ ಗುಂಪೊಂದು ದಾಳಿ ಮಾಡಿದ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದು ಹಿಂಸಾಚಾರಕ್ಕೆ ಕಾರಣವಾಗಿದೆ ಮತ್ತು ಒಂಬತ್ತು ಜೀವಗಳನ್ನು ಬಲಿ ಪಡೆದಿದೆ.

Join Whatsapp