ಪತ್ನಿ ಜೊತೆ ಜಗಳ ಮಾಡಿದ ಯೋಧನ ಕೊಲೆಗೈದ ಬಾವ

Prasthutha|

ಬಾಗಲಕೋಟೆ: ಯೋಧನೊಬ್ಬನನ್ನು ತನ್ನ ಪತ್ನಿಯ ಸಹೋದರನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.

- Advertisement -


ಕರಿಸಿದ್ದಪ್ಪ ಕಳಸದ (25) ಕೊಲೆಯಾದ ಯೋಧನಾಗಿದ್ದು, ಸಿದ್ದನಗೌಡ ದೂಳಪ್ಪ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.


ಗುರುವಾರ ರಾತ್ರಿ ಊಟ ಮಾಡುವ ವೇಳೆ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿತ್ತು. ಆ ಬಳಿಕ ಪತ್ನಿ ತನ್ನ ಸಹೋದರನಿಗೆ ಕರೆ ಮಾಡಿ ಮನೆಗೆ ಕರೆಸಿದ್ದರು. ಕೋಪದಲ್ಲಿ ಬಂದ ಸಿದ್ದನಗೌಡ ಚಾಕುವಿನಿಂದ ಯೋಧ ಕರಿಸಿದ್ದಪ್ಪನಿಗೆ ಇರಿದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಯೋಧ ಮೃತಪಟ್ಟಿದ್ದಾನೆ.

Join Whatsapp