ಪುತ್ತೂರು: ಎಸ್‌ಡಿಪಿಐ ವತಿಯಿಂದ ಬೂತ್ ಜೋಡೋ ಅಭಿಯಾನದ ಪ್ರಯುಕ್ತ ನಾಯಕರ ಸ್ನೇಹ ಸಮ್ಮಿಲನ

Prasthutha|

ಪುತ್ತೂರು: ಎಸ್‌ಡಿಪಿಐ ಹಮ್ಮಿಕೊಂಡಿರುವ ಬೂತ್ ಜೋಡೋ ಅಭಿಯಾನ ಅಂಗವಾಗಿ ಪಕ್ಷದ ನಾಯಕರ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಕಾರ್ಯದರ್ಶಿ ಮಜೀದ್ ತುಂಬೆ ರವರು ಚುನಾವಣೆಯಲ್ಲಿ ನಾಯಕರ ಪಾತ್ರ ಹಾಗೂ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಸವಿಸ್ತಾರವಾಗಿ ವಿವರಿಸಿದರು.

ರಾಜ್ಯ ಸಮಿತಿಯ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಪುತ್ತೂರು ಬೂತ್ ಜೋಡೋ ಅಭಿಯಾನದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವು ರವರು ಪುತ್ತೂರು ವಿಧಾನಾಸಭಾ ಕ್ಷೇತ್ರದ ಎಲ್ಲಾ ಬೂತ್ ಗಳಿಗೆ ಬೂತ್ ಉಸ್ತುವಾರಿಯನ್ನು ನೇಮಕ ಮಾಡಿದ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

- Advertisement -

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬ್ದುಲ್ ರಹೀಮ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Join Whatsapp