ಮಂತ್ರವಾದಿಯ ಮಾತು ಕೇಳಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ!

Prasthutha|

ಚೆನ್ನೈ: ಅಜ್ಜನ ಕಾಯಿಲೆ ವಾಸಿಯಾಗಲು ಆರು ತಿಂಗಳ ಮಗುವನ್ನು ಮೀನಿನ ತೊಟ್ಟಿಗೆ ಮುಳುಗಿಸಿ ಕೊಂದ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

- Advertisement -

ನಸ್ರುದ್ದೀನ್ ಮತ್ತು ಸಾಲಿಹಾ ದಂಪತಿಯ ಮಗುವನ್ನು ತನ್ನ ಹತ್ಯೆಗೈಯ್ದಿದ್ದಾಳೆ. ನಸ್ರುದ್ದೀನ್ ಅವರ ಚಿಕ್ಕಪ್ಪ ಅಝರುದ್ದೀನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಝರುದ್ದೀನ್‌ ನ ಪತ್ನಿ ಮಂತ್ರವಾದಿಯೊಬ್ಬರನ್ನು ಭೇಟಿಯಾಗಿ ಅವರ ಆಜ್ಞೆಯ ಮೇರೆಗೆ ಮಗುವನ್ನು ಹತ್ಯೆಗೈಯ್ದಿದ್ದಾಳೆ ಎಂದು ವರದಿಯಾಗಿದೆ.

ಮಗು ರಕ್ತ ಬರದೆ ಸಾಯಬೇಕು ಎಂದು ಮಂತ್ರವಾದಿ ಆದೇಶಿಸಿದ್ದು, ಅಝರುದ್ದೀನ್ ಪತ್ನಿ ರಾತ್ರಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ ಮೀನಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆಗೈದಿದ್ದಾಳೆ.

Join Whatsapp