ಶರಣಾದ ಸಿಧು: ಪಂಜಾಬ್ ‘ಕೈ’ ನಾಯಕ ಇನ್ಮುಂದೆ ಕಂಬಿ ಹಿಂದೆ

Prasthutha|

ನವದೆಹಲಿ: ಕೊನೆಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪೊಲೀಸರಿಗೆ ಶರಣಾಗಿದ್ದಾರೆ. 34 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಹತ್ಯೆಯಾದ ಘಟನೆಯಲ್ಲಿ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅನಾರೋಗ್ಯದ ಕಾರಣ ನೀಡಿ ಶರಣಾಗಲು ಇನ್ನೂ ಕೆಲವು ವಾರಗಳ ಸಮಯಾವಕಾಶವನ್ನು ಕೋರಿದ್ದರೂ ಫಲ ಸಿಗದೇ ಸಿಧು ಇಂದು ಪೊಲೀಸರಿಗೆ ಶರಣಾಗಿದ್ದಾರೆ.

- Advertisement -

ರಾಜ್ಯ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನಂತರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕ್ರಿಕೆಟಿಗ-ರಾಜಕಾರಣಿ ಸಿಧು ಇನ್ಮುಂದೆ ಒಂದು ವರ್ಷಗಳ ಕಾಲ ಕಂಬಿಯೆಣಿಸಬೇಕಾಗಿದೆ.

Join Whatsapp