ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಹೆಚ್‌ಡಿಕೆಯನ್ನು ಸಿಎಂ ಮಾಡಿದ್ದೆವು: ಸಿದ್ದರಾಮಯ್ಯ

Prasthutha|

- Advertisement -

ಕೊಪ್ಪಳ: ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಎಚ್.ಡಿ.ಕುಮಾರಸ್ವಾಮಿ ಯನ್ನು ಸಿಎಂ ಮಾಡಿದ್ದೆವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ‌ ಎನ್ನೋದು ಸೇವೆ. ಅಧಿಕಾರ ಬಂದ ಮೇಲೆ ಇನ್ನೊಬ್ಬರ ಮೇಲೆ ಸೇಡು ತೀರಿಸಿಕೊಳ್ಳುವುದಲ್ಲ. ಬಿಜೆಪಿಗರು ಜನರ ಸೇವೆ ಬಿಟ್ಟಿದ್ದಾರೆ. ಬರೀ ಲೂಟಿ ಹೊಡೆಯೋದೆ ಮಾಡುತ್ತಿದ್ದಾರೆ. ರಾಯರೆಡ್ಡಿ ಈ ಕ್ಷೇತ್ರದಲ್ಲಿ ಸೋತಿದ್ದರು ಎನ್ನುವುದು ನಂಗೆ ಉಹಿಸೋಕೊಳ್ಳೊಕೆ ಸಾಧ್ಯವಾಗುತ್ತಿಲ್ಲ. ಈ ಬಾರೀ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದರು.



Join Whatsapp